ಲೋಕಾಯುಕ್ತ ದಾಳಿ ಪಟ್ಟಣ ಪಂಚಾಯಿತಿ ಸದಸ್ಯ ಅರೆಸ್ಟ್…..!!!
![ಲೋಕಾಯುಕ್ತ ದಾಳಿ ಪಟ್ಟಣ ಪಂಚಾಯಿತಿ ಸದಸ್ಯ ಅರೆಸ್ಟ್…..!!!](https://shikarinews.com/wp-content/uploads/2022/11/20221121_195600.jpg)
ಪಟ್ಟಣ ಪಂಚಾಯಿತಿ ಸದಸ್ಯನೊರ್ವನ ಮೇಲೆ ಲಂಚ ಸ್ವಿಕರಿಸಿದ ಹಿನ್ನಲೆ ಲೋಕಾಯುಕ್ತ ಪೋಲಿಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಸಾಗರ ತಾಲೂಕಿನ ಜೋಗ್ ಪಾಲ್ಸ್ ಬಳಿ ಚಿಕನ್ ಅಂಗಡಿ ಮಾಲೀಕನಿಂದ 50,000 ಲಂಚ ಪಡೆಯುವ ವೇಳೆ ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ಸದಸ್ಯ ಕೆಸಿ ಹರೀಶನನ್ನು ಅವರ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಜೋಗದ ಬಜಾರ್ ಲೈನ್ ಲ್ಲಿರುವ ಚಿಕನ್ ಅಂಗಡಿ ಮಾಲಿಕ ಅಹಮದ್ ಬಾಕಿ ಅವರಿಗೆ ತ್ಯಾಜ್ಯವನ್ನು ಪಕ್ಕದ ಮೋರಿಗೆ ಎಸೆಯುತ್ತಿದ್ದ ಕಾರಣ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯು ಅಂಗಡಿ ಮುಚ್ಚುವಂತೆ ಕೆಲ ದಿನಗಳ ಹಿಂದೆ ನೋಟಿಸ್ ನೀಡಿತು.
![](https://shikarinews.com/wp-content/uploads/2022/11/20221121_195758-1024x576.jpg)
ನಂತರ ಅದೇ ವಾರ್ಡ್ ನ ಸದಸ್ಯರಾಗಿರುವ ಹರೀಶ್ ಅವರು ಮಾಲೀಕನನ್ನು ಸಂಪರ್ಕಿಸಿ 1,00,000 ಬೇಡಿಕೆ ಇಟ್ಟು ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಮಾತುಕತೆ ನಡೆದು 50,000 ರೂ ಕೊಡುವುದಾಗಿ ಚಿಕನ್ ಅಂಗಡಿ ಮಾಲಿಕ ಒಪ್ಪಿಕೊಂಡಿದ್ದರು. ನಂತರ ಅವರು ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ಈ ಬಗ್ಗೆ ದೂರು ನೀಡಿದ್ದರು. ಸೋಮವಾರ ಮಧ್ಯಾಹ್ನ ಎರಡರ ಸಮಯದಲ್ಲಿ ಕೆ ಸಿ ಹರೀಶ್ ಮನೆಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಚಿಕನ್ ಅಂಗಡಿ ಮಾಲೀಕ ಅಹಮದ್ ಬಾಕಿಯಿಂದಪಡೆಯುವಾಗಲೇ ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರು ದಾಳಿ ನಡೆಸಿದ ತಕ್ಷಣ ಆರೋಪಿ 50,000ಗಳನ್ನು ಸುಟ್ಟುಹಾಕಲು ಯತ್ನಿಸಿದ್ದ ಎನ್ನಲಾಗಿದೆ. ಚಿತ್ರದುರ್ಗ ಲೋಕಾಯುಕ್ತ ಎಸ್ ಪಿ ಮಾರ್ಗದರ್ಶನದಲ್ಲಿ ಶಿವಮೊಗ್ಗ ಲೋಕಾಯುಕ್ತ ಡಿಎಸ್ಪಿ ಮೃತ್ಯುಂಜಯ ಅವರ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಿದ್ದಾರೆ.
News by Raghu shikari-7411515737