ಶಿಕಾರಿಪುರ:ಕಾಳೇನಹಳ್ಳಿಯ ಶಿವಯೋಗಾಶ್ರಮ ಜಾತ್ರಾ ಮಹೋತ್ಸವ ಮೈತ್ರಾ ದೇವಿ ಸ್ಮಾರಕ ಆಯುರ್ವೇದ ಆಸ್ಪತ್ರೆ ಲೋಕಾರ್ಪಣೆ..!
![ಶಿಕಾರಿಪುರ:ಕಾಳೇನಹಳ್ಳಿಯ ಶಿವಯೋಗಾಶ್ರಮ ಜಾತ್ರಾ ಮಹೋತ್ಸವ ಮೈತ್ರಾ ದೇವಿ ಸ್ಮಾರಕ ಆಯುರ್ವೇದ ಆಸ್ಪತ್ರೆ ಲೋಕಾರ್ಪಣೆ..!](https://shikarinews.com/wp-content/uploads/2022/02/IMG_20220222_210607_039.jpg)
ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿಯ ಶಿವಮೊಗ್ಗ ಆಶ್ರಮದ ಆವರಣದಲ್ಲಿ ಬುಧವಾರ ಶಿವಯೋಗಿ ಹಾನಗಲ್ಲ ಕುಮಾರಸ್ವಾಮಿ ಮಹಾ ಶಿವಯೋಗಿಗಳವರ 92ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ರೇವಣಸಿದ್ಧ ಮಹಾ ಶಿವಯೋಗಿಗಳವರ ಪ್ರಥಮ ಪುಣ್ಯಸ್ಮರಣೋತ್ಸವ ಮೈತ್ರಾದೇವಿ ಸ್ಮಾರಕ ಆಯುರ್ವೇದ ಆಸ್ಪತ್ರೆ ಲೋಕಾರ್ಪಣೆ ಸಮಾರಂಭವನ್ನು ಆಯೋಜಿಸಲಾಗಿದೆ.
![](https://shikarinews.com/wp-content/uploads/2022/02/IMG_20220222_210622_320-1024x471.jpg)
ಇದೇ ಸಂದರ್ಭದಲ್ಲಿ ಶ್ರೀ ಗುರು ರುದ್ರಮುನಿ ಶಿವಯೋಗಿಗಳವರ ರಥೋತ್ಸವ ಶ್ರೀ ಸಂಗಮೇಶ್ವರ ತೆಪ್ಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಆನಂದಪುರ ಗುರುಗಳಾದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ
ಕಾಳೇನಹಳ್ಳಿ ಗೋಣಿಬೀಡು ಮಠದ ಶ್ರೀಗಳಾದ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು
ಹಾಗೂ ಬಸವಕೇಂದ್ರ ವಿರಕ್ತಮಠದ ಚನ್ನಬಸವ ಮಹಾಸ್ವಾಮಿಗಳು ಮಾತೇ ಶರಣಂಬಿಕೆ ಬಸವಕೇಂದ್ರ ಶಿಕಾರಿಪುರ ವಹಿಸಲಿದ್ದಾರೆ.
![](https://shikarinews.com/wp-content/uploads/2022/02/IMG-20220222-WA0042-1024x471.jpg)
ಶಿಕಾರಿಪುರ ಮೈತ್ರಾದೇವಿ ಸ್ಮಾರಕ ಆಯುರ್ವೇದ ಆಸ್ಪತ್ರೆ ಲೋಕಾರ್ಪಣೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಗೊಳಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸದ ಬಿ.ವೈ ರಾಘವೇಂದ್ರ ಸಂಸದರು ಕಾರ್ಯಾಧ್ಯಕ್ಷರು ಶಿವಯೋಗಶ್ರಮ ವಹಿಸಿಲಿದ್ದಾರೆ.
![](https://shikarinews.com/wp-content/uploads/2022/02/IMG-20220222-WA0041-730x1024.jpg)
ಮುಖ್ಯ ಅತಿಥಿಗಳಾಗಿ ಅಭಿವೃದ್ಧಿ ಪ್ರಾಧಿಕಾರ ಸಮಿತಿಯ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ರುದ್ರೆಗೌಡ್ರು ಉಪಸ್ಥಿತರಿರಲಿದ್ದಾರೆ.
ಅದೇ ದಿನ ಸಂಜೆ ಸಾಂಸ್ಕೃತಿಕ ಸಂಜೆ ವಿಶೇಷ ಕಾರ್ಯಕ್ರಮ ಹಾಗೂ ಸ್ಥಳೀಯ ಮಕ್ಕಳಿಂದ ನೃತ್ಯ ರೂಪಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶಿವಯೋಗಾಶ್ರಮ ದ ಸಮಸ್ತ ಭಕ್ತ ವೃಂದ ಹಾಗೂ ಕಾಳೇನಹಳ್ಳಿ ಕಪ್ಪನಹಳ್ಳಿ,ಕೊಟ್ಟ ಶಿಕಾರಿಪುರ ಸುತ್ತಮುತ್ತಲಿನ ಗ್ರಾಮಸ್ಥರು ಕಾಳಿಮಠದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
News by : Raghu Shikari-7411515737