ಶಿಕಾರಿಪುರ:ಪ್ರಧಾನಿ ಮೋದಿ ಅವರು ಪೌರ ಕಾರ್ಮಿಕರ ದಿನ ಕಾರ್ಮಿಕರ ಪಾದಪೂಜೆ ಮಾಡಿದ್ದಾರೆ: ಸಂಸದ ಬಿ.ವೈ ರಾಘವೇಂದ್ರ..!
![ಶಿಕಾರಿಪುರ:ಪ್ರಧಾನಿ ಮೋದಿ ಅವರು ಪೌರ ಕಾರ್ಮಿಕರ ದಿನ ಕಾರ್ಮಿಕರ ಪಾದಪೂಜೆ ಮಾಡಿದ್ದಾರೆ: ಸಂಸದ ಬಿ.ವೈ ರಾಘವೇಂದ್ರ..!](https://shikarinews.com/wp-content/uploads/2021/09/IMG-20210929-WA0059.jpg)
ಶಿಕಾರಿಪುರ :ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಪೌರಕಾರ್ಮಿಕ ದಿನದಲ್ಲಿ ಪಾದ ಪೂಜೆಯನ್ನು ಮಾಡಿದ್ದಾರೆ, ಇವರ ನೇತೃತ್ವದಲ್ಲಿ ಶ್ರೀ ಸಾಮಾನ್ಯನನ್ನು ಗೌರವಿಸುವ ಕೆಲಸವಾಗಿದೆ,
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಪೌರಕಾರ್ಮಿಕರಿಗೆ ಆಶ್ರಯ ಮನೆಯನ್ನು ಮತ್ತು ಮೂಲ ಭೂತ ಸೌಕರ್ಯವನ್ನು ಕೊಡುವ ಕೆಲಸ ಮಾಡಿದ್ದಾರೆ ನಮ್ಮ ಶಿಕಾರಿಪುರ ತಾಲೂಕು ಮಾದರಿ ತಾಲೂಕು ಆಗಬೇಕು ಎಂದರು.
![](https://shikarinews.com/wp-content/uploads/2021/09/IMG-20210929-WA0061-1024x682.jpg)
ಶಿಕಾರಿಪುರ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಬುಧವಾರ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕಛೇರಿಯ ಮುಂಭಾಗದಲ್ಲಿ ಗಿಡವನ್ನು ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
![](https://shikarinews.com/wp-content/uploads/2021/09/IMG-20210929-WA0062-1024x682.jpg)
ಪೌರಕಾರ್ಮಿಕರು ಒಂದು ದಿನ ರಜೆ ಮಾಡಿದರೆ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಾಗುವುದಿಲ್ಲ ಪಟ್ಟಣದಲ್ಲಿ ಪೌರ ಕಾರ್ಮಿಕರಿಗೆ ಆರೋಗ್ಯ,ತಪಾಸಣೆ,ಸಮವಸ್ತ್ರ, ನಿವೇಶ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
![](https://shikarinews.com/wp-content/uploads/2021/09/IMG-20210929-WA0060-1024x682.jpg)
ಕೋವಿಡ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕೂಡ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕರ್ತವ್ಯವನ್ನು ನಿರ್ವಹಿಸಿರುವುದು ಶ್ಲಾಘನೀಯ ಪೌರಕಾರ್ಮಿಕರು ತಮ್ಮ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಅದಕ್ಕೆ ಬೇಕಾದಂತಹ ಮುಂಜಾಗ್ರತೆ ವಹಿಸಬೇಕು
![](https://shikarinews.com/wp-content/uploads/2021/09/IMG_20210825_185201_020.jpg)
ಕಾರ್ಮಿಕರು ದುಡಿಮೆಯ ಸ್ವಲ್ಪ ಭಾಗವನ್ನು ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದರು.
![](https://shikarinews.com/wp-content/uploads/2021/08/918197366777_status_7d5ff211dac742b68023271a8646fe82-1024x585.jpg)
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಲಕ್ಷ್ಮಿ ಮಹಾಲಿಂಗಪ್ಪ, ರೇಣುಕಾ ಸ್ವಾಮಿ.ಹಿರಿಯರಾದ ಎಸ್.ಬಿ ಮಠದ್,ಮುಖ್ಯಾಧಿಕಾರಿ ಸುರೇಶ್,ಟಿ.ಎಸ್ ಮೋಹನ್ ಮತ್ತು ಪುರಸಭೆಯ ಸದಸ್ಯರು ಪೌರಕಾರ್ಮಿಕರು ಮತ್ತಿತರರು ಉಪಸ್ಥಿತರಿದ್ದರು.
News By: Raghu Shikari -7411515737