ಶಿಕಾರಿಪುರ: ಸಾಂಸ್ಕೃತಿಕ ಭವನದಲ್ಲಿ ಗುರುವಾರ ಶಂಕರನಾಗ್ ಅವರ ಪುಣ್ಯಸ್ಮರಣೆ ಪ್ರಯುಕ್ತ ಅಮರ ಶಂಕರ ಕಾರ್ಯಕ್ರಮ..!
ಶಿಕಾರಿಪುರ ಪಟ್ಟಣ ಸಾಂಸ್ಕೃತಿಕ ಭವನದಲ್ಲಿ ಸೆ.30 ರ ಗುರುವಾರ ಸಂಜೆ 5:30 ಕ್ಕೆ ಶಂಕರನಾಗ್ ಬಳಗ ವತಿಯಿಂದ ಅಮರ ಶಂಕರ ಎನ್ನುವ ಕಾರ್ಯಕ್ರಮವನ್ನು ಶಂಕರನಾಗ್ ಅವರ 31ನೇ ಅವರ ಪುಣ್ಯ ಸ್ಮರಣೆ ಪ್ರಯುಕ್ತ ಆಯೋಜಿಸಲಾಗಿದೆ ಎಂದು ನಿರ್ದೇಶಕ ವೈಭವ ಬಸವರಾಜ್ ತಿಳಿಸಿದರು.
ನಟ,ನಿರ್ದೇಶಕ, ಸಮಾಜಿಕ ಚಿಂತಕ ಶಂಕರನಾಗ್ ಅವರ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ಅಭಿಮಾನಿಗಳು ವಿಶೇಷ ರೀತಿಯಲ್ಲಿ ಆಚರಸಲಾಗುತ್ತಿದ್ದು ಸಂಸದ ಬಿ.ವೈ ರಾಘವೇಂದ್ರ ಅವರು ಕಾರ್ಯಕ್ರಮ ಉದ್ಘಾಟನೆ ನಡೆಸಲಿದ್ದು ಮುಖ್ಯಾ ಅಥಿತಿ ಗಳಾಗಿ ಶಿಕ್ಷಣಾಧಿಕಾರಿ ಶಶಿಧರ್, ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಂಕರ ನಾಗ್ ಸಂಗೀತ, ನೃತ್ಯ ಹಾಗೂ ಅವರ ಆದರ್ಶ ಅವರ ಪೂರ್ಣವಾಗಿ ಶಂಕರ ನಾಗ್ ಅವರನ್ನು ವ್ಯಕ್ತಿತ್ವ ಪರಿಚಯ ನಡೆಸಲಾಗುವುದು ಎಂದರು.
ಕಲಾವಿದರು ಕಲಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಘಟಕರು ಮನವಿ ಮಾಡಿದಗದಾರೆ.
ಈ ಸಂದರ್ಭದಲ್ಲಿ ವೈಭವ್ ಬಸವರಾಜ್, ವಿಠಲ್ ಮಹೇಂದ್ರಕರ್, ಪ್ರಭು. ಇದ್ದರು.
News By: Raghu Shikari-7411515737