ಶಿಕಾರಿಪುರ: ಡಾ.ಬಾಬು ಜಗಜೀವನ್ ರಾಂ ಅವರು ಪ್ರಧಾನಿ ಆಗಬೇಕಾಗಿತ್ತು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ..!

ಶಿಕಾರಿಪುರ: ಪಟ್ಟಣದಲ್ಲಿ ಡಾ.ಬಾಬು ಜಗಜೀವನ್ ರಾಂ ಭವನದ ಉದ್ಘಾಟನೆಯನ್ನು ನಡೆಸಿ ಮಾತನಾಡಿದ ಅವರು
ಡಾ.ಬಾಬು ಜಗಜೀವನ್ ರಾಂ ಅವರು 50 ವರ್ಷಗಳ ಕಾಲ ಸಂಸತ್ ಸದಸ್ಯರಾಗಿ ಉಪ ಪ್ರಧಾನಿಯಾಗಿದ ಅವರನ್ನು ಪ್ರಧಾನಿಯಾಗಿ ನೋಡಬೇಕಿತ್ತು ಎಲ್ಲಾ ಅರ್ಹತೆಗಳನ್ನು ಅವರು ಹೊಂದಿದ್ದರು ಅದರೆ ದುರದೃಷ್ಟವಶಾತ್ ಆಗಲಿಲ್ಲ ಎಂದರು.

ಆದಿ ಜಾಂಬವ ಮಾದಿಗ ಸಮಾಜದ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಈ ಸಮುದಾಯ ಭವನ ಉಪಯೋಗಿಸುವಂತೆ ಆಗಬೇಕು ಹೊಲಿಗೆ , ಕಂಪ್ಯೂಟರ್ ತರಬೇತಿ ಇದಕ್ಕೆ ಬೇಕಾದ ಎಲ್ಲಾರೀತಿ ಸಹಕಾರ ನೀಡುತ್ತೇವೆ ಕಟ್ಟಡ ಸದ್ಬಳಕೆಯಾಗಬೇಕು ಎಂದರು.
ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ ಹಿಂದುಳಿದ ವರ್ಗಗಳ ಜೀತ ಪದ್ದತಿಗಳ ಪರ ಹೋರಾಟದ ಬಗ್ಗೆ ಡಾ.ಬಿ.ಆರ್ ಅಂಬೇಡ್ಕರ್ ಅವದ ಆದರ್ಶದಂತೆ ಬಿ.ಎಸ್ ವೈ ಅವರು ನಡೆದಿದ್ದಾರೆ.

ಸರ್ಕಾರ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ದುರುಪಯೋಗವಾಗಬಾರದ್ದು ಎಂದರು.

ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ. ಎಂಐಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ಎಂಎಲ್ಸಿ ರುದ್ರೇಗೌಡ, ಆರ್ಯ ವೈಶ್ಯ ನಿಗಮದ ಅಧ್ಯಕ್ಷ ಅರುಣ್ ಕುಮಾರ್, ಮಾದಿಗ ಸಮಾಜ್ ಬಸವರಾಜಪ್ಪ ರೋಟೆ, ಚಂದ್ರಪ್ಪ, ಹೋಳೆಯಪ್ಪ, ಶಿವಪ್ಪ, ಇದ್ದರು.
News by: Raghu Shikari-7411515737