ಶಿಕಾರಿಪುರ:ರಾಷ್ಟ್ರೀಯ ಹೆದ್ದಾರಿ ಕುರಿತು ಕೇಂದ್ರ ಭೂ ಹೆದ್ದಾರಿ ಇಲಾಖೆ ಡಿ.ಜಿ.ಐ ಪಾಂಡೆ ಜೊತೆ ಸಂಸದ ಬಿ.ವೈ ಆರ್ ಸಭೆ..!
ಶಿಕಾರಿಪುರ ಪಟ್ಟಣ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯ ಕುರಿತು ವಿಷೇಶ ಸಭೆಯನ್ನು ನಡೆಸಲಾಯಿತು.
ಕೇಂದ್ರದ ಭೂ ಹೆದ್ದಾರಿ ಇಲಾಖೆಯ ಡಿ. ಜಿ.ಐ.ಕೆ. ಪಾಂಡೆರವರು ಸಿಂಗದೂರು ಸೇತುವೆಯ ಪ್ರಗತಿ ಪರಿಶೀಲನೆ,ವೀಕ್ಷಣೆ ಮಾಡಲು ಜಿಲ್ಲೆಗೆ ಆಗಮಿಸಿದರು.
ಶಿವಮೊಗ್ಗ ರಿಂಗ್ ರೋಡ್ ಅಭಿವೃದ್ಧಿ, ಕೊಲ್ಲೂರಿನಿಂದ ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಾಗೂ ಶಿವಮೊಗ್ಗ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಗಳ ಪ್ರಗತಿಯ ಬಗ್ಗೆ ಹಾಗು ಹೆದ್ದಾರಿಗಳ ಆಭಿವೃಧ್ಧಿಗೆ ಇನ್ನು ಹೆಚ್ಚಿನ ಅನುದಾನವನ್ನು ನೀಡುವಂತೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಎಂಐಡಿಬಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ, R O ವಿಜಯ್ ಕುಮಾರ್ , ಗೋವಿಂದರಾಜು,ಜಿಲ್ಲಾಧಿಕಾರಿ ಶಿವಕುಮಾರ್, ವಿವಿಧ ತಾಲೂಕ್ ಮಟ್ಟದ ಅಧಿಕಾರಿಗಳು ಇದ್ದರು.
News By: Raghu Shikari-7411515737