ಶಿಕಾರಿಪುರ: ಸಾರ್ವಜನಿಕ‌ ಆಸ್ಪತ್ರೆಯಲ್ಲಿ ಸಂಸದ ಬಿ.ವೈ ರಾಘವೇಂದ್ರರಿಂದ ಆಕ್ಸಿಜನ್ ಉತ್ಪಾದನಾ ಘಟಕ ಉದ್ಘಾಟನೆ..!

ಶಿಕಾರಿಪುರ: ಸಾರ್ವಜನಿಕ‌ ಆಸ್ಪತ್ರೆಯಲ್ಲಿ ಸಂಸದ ಬಿ.ವೈ ರಾಘವೇಂದ್ರರಿಂದ ಆಕ್ಸಿಜನ್ ಉತ್ಪಾದನಾ ಘಟಕ ಉದ್ಘಾಟನೆ..!

ಶಿಕಾರಿಪುರ ಪಟ್ಟದ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಲಾಗಿರುವ ಆಕ್ಸಿಜನ್ ಉತ್ಪಾದನಾ ಘಟಕವನ್ನು ಶನಿವಾರ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಸಿದರು.

ಈ ವೇಳೆ ಮಾತನಾಡಿದ ಅವರು ಇಡೀ ರಾಜ್ಯದಲ್ಲಿ ಮೂರು ಜಿಲ್ಲೆಗೆ ಆಕ್ಸಿಜನ್ ಪ್ಲಾಟ್ ಮಂಜೂರು ಮಾಡಿದ್ದು ಸೊರಬ‌ ಶಿಕಾರಿಪುರ ಎರಡು ತಾಲೂಕಿನಲ್ಲಿ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.

ಶಿವಮೊಗ್ಗ ಮೇಗ್ಗಾನ್ ನಂತರ ಅತೀಬಹೆಚ್ಚು ಒತ್ತಡ ಶಿಕಾರಿಪುರ ಆಸ್ಪತ್ರೆಗೆ ಇದೆ ಆಕ್ಸಿಜನ್ ಉತ್ಪಾದನಾ ಘಟಕಗದ ಆಕ್ಸಿಜನ್ ಲಾಬ್ ದೆಹಲಿಯಲ್ಲಿ ಇದ್ದು ಸ್ಯಾಪಲ್ ದೆಹಲಿಗೆ ಕಳುಹಿಸಿ ಸ್ಯಾಂಪಲ್ ಪಾಸ್ ಆಗಿದ್ದು ಇಂದು ಅಧಿಕೃತವಾಗಿ ಆರಂಭಿಸಲಾಗಿದೆ ಎಂದರು.

ಡಾ.ಪ್ರಮೋದ್ ಅವರ ಸಹಕಾರದಿಂದ ಸತೀಸ್ ಅಂಬಾಡಿ ಓಟು ಫರ್ ಇಂಡಿಯಾ ಸಂಸ್ಥೆ ರಾಜ್ಯಕ್ಕೆ ಒಟ್ಟು 55 ಆಕ್ಸಿಜನ್ ತಯಾರಿಸುವ ಮಿಷನ್ ಕೊಡುಗೆ ನೀಡಿದ್ದಾರೆ ಶಿವಮೊಗ್ಗ ಜಿಲ್ಲೆಗೆ 22 ಕೊಟ್ಟಿದ್ದಾರೆ.

ರಾಘವೇಂದ್ರ ಹಸ್ತಾಂತರಂ ಎನ್ನುವ ಇಂಜಿನಿಯರ್ ಅವರ ನಮ್ಮ‌ ಜಿಲ್ಲೆಯಲ್ಲಿ ಇಂಜಿನಿಯರಿಂಗ್ ಮಾಡಿದ ವಿದ್ಯಾರ್ಥಿ ಅವರ ಶಿವಮೊಗ್ಗ ಭದ್ರಾವತಿ ಸಾಗರ ಶಿಕಾರಿಪುರ ತೀರ್ಥಹಳ್ಳಿ ಸೇರಿ ಒಟ್ಟು 22 ಕಿಟ್ ನೀಡಿದ್ದಾರೆ.

ಈ ಯಂತ್ರ ದಿನದ 24 ಗಂಟೆಗೆ – 7200 ಲಿಟರ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ ಇದರಿಂದ ಜಿಲ್ಲೆಯ ಕರೋನ ರೋಗಿಗಳಿಗೆ ಸಹಕಾರಿ ಆಗಲಿದೆ ಎಂದರು.

ಈ‌ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿವಕುಮಾರ್,ರಾಜ್ಯ ಅರಣ್ಯ ಸಮಿತಿ‌ ಉಪಾಧ್ಯಕ್ಷ ಕೆ. ರೇವಣ್ಣಪ್ಪ, ತಾಲೂಕ್ ವೈಧ್ಯಧಿಕಾರಿ ಡಾ.ಚಂದ್ರಪ್ಪ, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಡಾ.ಶಿವಾನಂದ,ಪುರಸಭಾ ಸದಸ್ಯರಾದ ಪ್ರಶಾಂತ್ಜೀ ನಳ್ಳಿ,ರೂಪಕಲಾ, ಉಮಾವತಿ, ವೈಧ್ಯರು ಆಸ್ಪತ್ರೆ ಸಿಬ್ಬಂದಿಗಳು ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!