ಶಿವಮೊಗ್ಗ :ಮುಖ್ಯಮಂತ್ರಿ ಬಿ.ಎಸ್ ವೈ ಸ್ವಕ್ಷೇತ್ರ ಆಗಮನ ಹುಟ್ಟುಹಬ್ಬ ಆಚರಣೆ ವಿವಿಧ ಕಾಮಗಾರಿ ಚಾಲನೆ ಉದ್ಘಾಟನೆ..!
![ಶಿವಮೊಗ್ಗ :ಮುಖ್ಯಮಂತ್ರಿ ಬಿ.ಎಸ್ ವೈ ಸ್ವಕ್ಷೇತ್ರ ಆಗಮನ ಹುಟ್ಟುಹಬ್ಬ ಆಚರಣೆ ವಿವಿಧ ಕಾಮಗಾರಿ ಚಾಲನೆ ಉದ್ಘಾಟನೆ..!](https://shikarinews.com/wp-content/uploads/2021/02/IMG-20201018-WA0114-678x381-1.jpg)
ಶಿವಮೊಗ್ಗ: ಮುಖ್ಯಮಂತ್ರಿ ಯಡಿಯೂರಪ್ಪರವರು ಫೆಬ್ರವರಿ 28 ಮತ್ತು ಮಾರ್ಚ್ 01 ರಂದು ಶಿವಮೊಗ್ಗದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
![](https://shikarinews.com/wp-content/uploads/2021/02/IMG_20210225_212014_286-1024x853.jpg)
ಫೆ. 28 ರ ಭಾನುವಾರ ಬೆ. 09.30 ಕ್ಕೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹೊರಟು ಬೆ. 10.55ಕ್ಕೆ ಸೊರಬಕ್ಕೆ ಆಗಮಿಸಲಿದ್ದಾರೆ.
![](https://shikarinews.com/wp-content/uploads/2021/02/IMG_20210226_191133_659-1024x864.jpg)
ನಂತರ ಬೆ. 11. ಕ್ಕೆ ಆನವಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸೊರಬ ತಾಲೂಕಿನ ಮೂಗೂರು ಕೆರೆ ತುಂಬಿಸುವ ಯೋಜನೆ ಲೋಕಾರ್ಪಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮ.1.15ಕ್ಕೆ ಸೊರಬದಿಂದ ಹೆಲಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಆಗಮಿಸುವರು.
![](https://shikarinews.com/wp-content/uploads/2021/02/IMG_20210225_212326_766-1024x864.jpg)
ಸಂಜೆ 5.30ಕ್ಕೆ ನಗರದ ಆಲ್ಕೊಳ ಸರ್ಕಲ್ ಹತ್ತಿರದ ಗೋಪಾಲಗೌಡ ಬಡಾವಣೆಯಲ್ಲಿರು ಮೆಡಿಕಲ್ ಶಾಪ್ ಅಸೋಸಿಯೇಷನ್ಸ್ ಔಷಧ ಭವನ ಉದ್ಘಾಟನೆ ನೆರವೇರಿಸುವರು.
![](https://shikarinews.com/wp-content/uploads/2021/02/IMG_20210225_232651_502-1024x864.jpg)
ಸಂ. 6.00ಕ್ಕೆ ನಗರದ ಹಳೇ ಜೈಲು ಆವರಣದಲ್ಲಿ ಜಿಲ್ಲಾಡಳಿತ ಮತ್ತು ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿ. ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ಸ್ಮಾರ್ಟ್ಸಿಟಿ ವತಿಯಿಂದ ಕೈಗೊಂಡ ಬಹು ಉಪಯುಕ್ತತಾ ಸ್ಥಳದ ಅಭಿವೃದ್ಧಿಯ ಭಾಗಶಃ ಅನುಷ್ಠಾನ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.
![](https://shikarinews.com/wp-content/uploads/2021/02/IMG_20210225_212108_905-1024x864.jpg)
ಸಂ. 6.30ಕ್ಕೆ ಹಳೇ ಜೈಲು ಆವರಣದಲ್ಲಿ ಬಿ.ಎಸ್. ಯಡಿಯೂರಪ್ಪನವರ ಅಭಿನಂದನಾ ಸಮಿತಿ ವತಿಯಿಂದ ಆಯೋಜಿಸಿರುವ ಮುಖ್ಯಮಂತ್ರಿಯವರಿಗೆ “ನಮ್ಮೊಲುಮೆ” ಅಭಿಮಾನದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಹಾಗೂ ಅಂದು ಶಿವಮೊಗ್ಗದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
![](https://shikarinews.com/wp-content/uploads/2021/02/2021-1024x683.jpg)
ಮಾ.01 ರಂದು ಸೋಮವಾರ ಬೆಳಗ್ಗೆ 9.00ಕ್ಕೆ ನಗರದ ವಿನೋಬನಗರ ಗೆಜ್ಜೆನಹಳ್ಳಿ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
![](https://shikarinews.com/wp-content/uploads/2021/02/IMG_20210225_212125_093-1024x864.jpg)
ಬೆ. 9.15 ಶಿವಮೊಗ್ಗ ಮಹಾನಗರ ಪಾಲಿಕೆಯ ಹತ್ತಿರ ಎನ್.ಡಿ.ವಿ.ಹಾಸ್ಟೆಲ್ ಕಟ್ಟಡ ನಿರ್ಮಣಕ್ಕೆ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
![](https://shikarinews.com/wp-content/uploads/2021/02/IMG_20210225_212121_757-1024x864.jpg)
ಬೆ. 9.30ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![](https://shikarinews.com/wp-content/uploads/2021/02/IMG_20210225_212058_950-1024x864.jpg)
News by: Raghu Shikari-7411515737
![](https://shikarinews.com/wp-content/uploads/2021/02/IMG_20210225_212128_102-1-1024x864.jpg)
![](https://shikarinews.com/wp-content/uploads/2021/02/IMG_20210225_212117_523-1024x864.jpg)
![](https://shikarinews.com/wp-content/uploads/2021/02/IMG_20210225_212132_978-1024x864.jpg)
![](https://shikarinews.com/wp-content/uploads/2021/02/IMG_20210225_212111_410-1024x864.jpg)
![](https://shikarinews.com/wp-content/uploads/2021/02/IMG_20210225_212104_065-1024x864.jpg)
![](https://shikarinews.com/wp-content/uploads/2021/02/IMG_20210225_212330_905-1024x864.jpg)
![](https://shikarinews.com/wp-content/uploads/2021/02/IMG_20210225_212334_147-1024x864.jpg)