ತುಂಗಾ ನದಿಗೆ ಹಾರಿದ ಪ್ರೇಮಿಗಳು ನದಿಯಲ್ಲಿ ಕೊಚ್ಚಿಹೊದ ಯುವಕ ಯುವತಿ ಸಾವು..!
ಶಿವಮೊಗ್ಗ : ಶಿವಮೊಗ್ಗ: ಯುವ ಪ್ರೇಮಿಗಳಿಬ್ಬರು ಇಂದು ಬೈಪಾಸ್ ರಸ್ತೆಯ ಹೊಸ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ತುಂಗಾ ನದಿಗೆ ಇಬ್ಬರೂ ಪರಸ್ಪರ ಕೈಯಿಗೆ ಯುವತಿಯ ವೆಲ್ ಕಟ್ಟಿಕೊಂಡು ನದಿಗೆ ಹಾರಿದ್ದಾರೆ.
ವಿಷಯ ತಿಳಿದು ತತಕ್ಷಣವೇ ಸ್ಥಳಕ್ಕೆ ಆಗಮಿಸಿದ ತುಂಗಾ ನಗರ ಠಾಣೆ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಯುವತಿಯನ್ನು ನದಿಯಿಂದ ಮೇಲಕ್ಕೆ ತೆಗೆದುಕೊಂಡು ಆಕೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ಇನ್ನು, ನೀರಿನಲ್ಲಿ ಕಣ್ಮೆರೆಯಾಗಿರುವ ಯುವಕನಿಗಾಗಿ ಶೋಧ ಕಾರ್ಯ ನಡೆದಿದೆ ನಡೆಯುತ್ತಿದೆ.
ನದಿಗೆ ಹಾರಿದ ಪ್ರೇಮಿಗಳನ್ನು ಅನುಷಾ(19) ಹಾಗೂ ಸಂತೋಷ್(22) ಎಂದು ಗುರುತಿಸಲಾಗಿದ್ದು, ಹಸೂಡಿ ಗ್ರಾಮದವರು ಎಂದು ಹೇಳಲಾಗಿದೆ.
News By:Raghu Shikari-7411515737