ಶಿಕಾರಿಪುರ ಮಾಧ್ಯಹ್ನ 2 ನಂತರ ಎಲ್ಲಾ ಬಂದ್..!
ಶಿಕಾರಿಪುರ ತಾಲೂಕಿನಲ್ಲಿ ಕರೋನ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಶಿಕಾರಿಪುರ ತಾಲೂಕಿನಾದ್ಯಂತ ಸೋಮವಾರದಿಂದ ಬೆಳಗ್ಗೆ 6 ರಿಂದ ಮಾಧ್ಯಹ್ನ 2 ಗಂಟೆಯ ವರೆಗೆ ಮಾತ್ರ ಎಲ್ಲಾ ವ್ಯಾಪಾರ ವಹಿವಾಟು ಅವಕಾಶ ನೀಡಿಲಾಗಿದೆ ಎಂದು ತಹಶಿಲ್ದಾರ್ ಎಂ.ಪಿ ಕವಿರಾಜ್ ತಿಳಿಸಿದ್ದಾರೆ.
ಶಿಕಾರಿಪುರ ತಾಲೂಕಿನಾದ್ಯಂತ ಕರೋನ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಇಂದು ಸಂಸದ ಬಿ.ವೈ ರಾಘವೇಂದ್ರರವರ ನೇತೃತ್ವದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬೆಳಗ್ಗೆ 6. ರಿಂದ ಮಾಧ್ಯಹ್ನ 2ವರೆಗೆ ಎಲ್ಲಾ ರೀತಿಯ ವ್ಯಾಪರ ವಹಿವಾಟು ನಡೆಸ ಬಹದು ನಂತರ ಎಲ್ಲಾ ಸಂಪೂರ್ಣ ಬಂದ್ ಮಾಡಲಾಗುವುದು.
ಮೇಡಿಕಲ್, ಆಸ್ಪತ್ರೆ, ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಬಂದ್ ಇರಲಿದೆ ಎಂದು ತಿಳಿಸಿದ ಅವರು ಮುಂದಿನ ಆದೇಶದ ವರೆಗೂ ಸಾರ್ವಜನಿಕರು ಸಹಕಾರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
Raghu Shikari- 7411515737