ಶಿಕಾರಿಪುರ ಟೌನ್ ಪೋಲಿಸರಿಗೆ ಭಯ ಹುಟ್ಟಿಸಿದ ವಿಶೇಷ ಅತಿಥಿ ಯಾರು ಗೋತ್ತ..!
ಶಿಕಾರಿಪುರ ಪಟ್ಟಣ ಪೋಲಿಸ್ ಠಾಣೆಗೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದು ಪಟ್ಟಣ ಪೋಲಿಸರೇ ಭಯಗೊಂಡ ಘಟನೆ ಇಂದು ನಡೆದಿದೆ ಅಷ್ಟಕ್ಕೂ ಭಯಗೊಳ್ಳಿಸದ್ದು ಯಾರು ಗೋತ್ತ.
ಶಿಕಾರಿಪುರ ಪಟ್ಟಣ ಪೋಲಿಸ್ ಠಾಣೆಗೆ ಆವರಣದಲ್ಲಿ ನಾಗರಹಾವು ಒಂದು ಪ್ರತ್ಯಕ್ಷವಾಗಿದ್ದು ಕರ್ತವ್ಯ ನಿರ್ವಹಿಸುತ್ತಿದ ಪೋಲಿಸ್ ಸಿಬ್ಬಂದಿ ಆತಂಕಗೊಂಡು ತಕ್ಷಣ ಸ್ನೆಕ್ ತಜ್ಞರನ್ನು ಕರೆಸಿ ಸುರಕ್ಷಿತವಾಗಿ ಹಾವನ್ನು ಹಿಡಿದು ಕಾಡಿಗೆ ಬಿಡಲಾಗಿದೆ.
ಈ ಕುರಿತು ಪಿ.ಎಸ್ ಐ ರಾಜುರೆಡ್ಡಿ ಮಾತನಾಡಿ ನಮ್ಮ ಠಾಣೆ ಮುಂಭಾಗದ ಅವರಣದಲ್ಲಿ ಪಾರ್ಕ್ ಇದ್ದು ಗಿಡಿ ಮರಗಳಿವೆ ನಮ್ಮ ಸಿಬ್ಬಂದಿಗಳು ಸಾರ್ವಜನಿಕರು ಮರದ ನೆರಳಿಗೆ ನಿಂತಿರುತ್ತಾರೆ.
ಈ ಸ್ಥಳದಲ್ಲಿ ಹಾವು ಕಾಣಿಸಿಕೊಂಡಿದ್ದು ತಕ್ಷಣ ಹಾವು ಹಿಡಿಯುವ ನುರಿತರನ್ನು ಕರೆಸಿ ಹಿಡಿಸಲಾಯಿತು ನಂತರ ಹಾವನ್ನು ತರಲಘಟ್ಟ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು ಎಂದರು.