ಶಿಕಾರಿಪುರ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಪದಗ್ರಹಣ ಶಿಕಾರಿಪುರ ಕಾಂಗ್ರೇಸ್ ಸಕಲ ಸಿದ್ದತೆ…!
ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಲು ಪಟ್ಟಣ ತಾಲೂಕ್ ಕಾಂಗ್ರೆಸ್ ಪುರಸಭಾ ಸದಸ್ಯರಾದ ಹುಲ್ಮಾರ್ ಮಹೇಶ್ ಅವರ ಗೃಹ ಕಛೇರಿ ರಾಘವೇಂದ್ರ ಬಡಾವಣೆಯಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವ ಕುಮಾರ್ ರವರ “ಪದಗ್ರಹಣ” ಮತ್ತು “ಪ್ರತಿಜ್ಞಾ ದಿನ ” ಕಾರ್ಯಕ್ರಮ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಬೆಳಿಗ್ಗ 11 ಕ್ಕೆ ನಡೆಯಲಿದೆ.
ಶಿಕಾರಿಪುರ ತಾಲೂಕಿನ 44 ಗ್ರಾಮ ಪಂಚಾಯತ್ ಹಾಗೂ ಶಿರಾಳಕೊಪ್ಪದಲ್ಲಿ 2 ಹಾಗೂ ಶಿಕಾರಿಪುರ ಪಟ್ಟಣ 8 ಕಡೇ ಲೈವ್ ವಿಡಿಯೋ ವಿಕ್ಷಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋಣಿ ಮಾಲತೇಶ್ ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು ವೀಕ್ಷಿಸಲು ಪಕ್ಷದ ಎಲ್ಲಾ ವಿಭಾಗದ ಕಾರ್ಯಕರ್ತರು, ಅಭಿಮಾನಿಗಳು ಇಂದು ಹುಲ್ಮಾರ್ ಮಹೇಶ್ ಅವರ ಗೃಹ ಕಛೇರಿ ರಾಘವೇಂದ್ರ ಬಡಾವಣೆಗೆ ಹಾಜರಾಗುವಂತೆ ಪುರಸಭಾ ಸದಸ್ಯ ಹುಲ್ಮಾರ್ ಮಹೇಶ್ ಕೋರಿದ್ದಾರೆ.