ಶಿಕಾರಿಪುರ: ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಆನ್ ಲೈನ್ ಮೂಲಕ ವಿಡಿಯೋ ವಿಕ್ಷಣೆ..!
ಶಿಕಾರಿಪುರ ಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಇಂದು ಬೆಂಗಳೂರಿನಲ್ಲಿ ಪ್ರಮಾಣ ವಚನ ಪ್ರತಿಜ್ಙಾ ವಿಧಿ ಕಾರ್ಯಕ್ರಮವನ್ನು ವಿಡಿಯೋ ಮೂಲಕ ಲೈವ್ ನೋಡಲು ತಾಲೂಕಿನ ವಿವಿಧ ವಾರ್ಡ್ ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಾಘವೇಂದ್ರ ಬಡಾವಣೆಯಲ್ಲಿ ಪುರಸಭಾ ಸದಸ್ಯ ಹುಲ್ಮಾರ್ ಮಹೇಶ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರಿಗೆ ಪ್ರಮಾಣ ವಚನ ಸ್ವೀಕರ ಸಮಾರಂಭದ ಲೈವ್ ವಿಕ್ಷಿಸಲು ವ್ಯವಸ್ಥೆ ಮಾಡಿದ್ದರು ಈ ಸಂದರ್ಭದಲ್ಲಿ ತಾಲೂಕ್ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋಣಿ ಮಾಲತೇಶ್,ಪುರಸಭಾ ಸದಸ್ಯರಾದ ಜಯಶ್ರೀ, ಶಂಕುತಲಮ್ಮ, ಗೋಣಿ ಪ್ರಕಾಶ್, ಶಿಕಾರಿಪುರ ವಿಧಾನಸಭಾ ವಿಕ್ಷಕ ಮರಿಯೋಜಿರಾವ್,ಕಾಂಗ್ರೇಸ್ ಮುಖಂಡ ಯೂಸಫ್ ಆಲಿ, ಇದ್ದರು.
ಅಂಬೇಡ್ಕರ್ ಭವನದಲ್ಲಿ ಪುರಸಭಾ ಸದಸ್ಯ ಯುವ ಕಾಂಗ್ರೇಸ್ ಅಧ್ಯಕ್ಷ ಉಳ್ಳಿ ದರ್ಶನ್ ಅವರ ನೇತೃತ್ವದಲ್ಲಿ ಲೈವ್ ವಿಡಿಯೋ ಸ್ರೀನ್ ವ್ಯವಸ್ಥೆ ಮಾಡಿದ್ದರು ಇನ್ನೂ ದೈವಜ್ಞಾ ಭವನದಲ್ಲಿ ಕಾಂಗ್ರೇಸ್ ಮುಖಂಡ ರವೀಂದ್ರ,ನಾಗರಾಜ್ ಗೌಡ, ಹಾಗೂ ಪಟ್ಟಣ ವಿವಿಧ ವಾರ್ಡ್ ಗಳಲ್ಲಿ ಮುಖಂಡ ಲೈವ್ ವಿಡಿಯೋ ವಿಕ್ಷಣೆ ನಡೆಸಿ ಸಂಭ್ರಮಿಸಿದರು.