ಅಮ್ಲೀಯವಾದ ಫಿಲ್ಟರ್ ನೀರೇ ಸಿಗುತ್ತಿರುವ ಈ ಸಂಧರ್ಭದಲ್ಲಿ ರೋಗ ದೂರಮಾಡುವ ಪರಿಹಾರವೂ ಆಯುರ್ವೇದದಲ್ಲಿದೆ..!
*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-
ಅಚ್ಚರಿಯೇ..?
ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಶ್ರೀಯುತ ಕರಿಗೂಳಿಯವರು ಕುಡಿಯುವ ನೀರಿನ ಬಗ್ಗೆ ಪ್ರಶ್ನಿಸಿ ತಮ್ಮ ಊರಿನ ಫಿಲ್ಟರ್ ನೀರಿನ ಅನಾಹುತಗಳು ಬಗ್ಗೆ ತಿಳಿಸಿದ್ದಾರೆ….
ಸರ್ ನಮ್ಮ ಊರಿನಲ್ಲಿ ಸರಕಾರದ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದ್ದಾರೆ ಕುಡಿಯಲು ಅ ನೀರನ್ನು ತಾಮ್ರದ ಪಾತ್ರೆಯಲ್ಲಿ ತುಂಬಿ ಅದನ್ನು ಕುಡಿಯುತ್ತೆವೆ ಪಿಲ್ಟರ್ ಆಗಿರುವ ನೀರನ್ನು ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ಬಳಸಬಹುದಾ?ಸರ್ ದಯಮಾಡಿ ತಮ್ಮ ಬಿಡುವಿನ ವೇಳೆಯಲ್ಲಿ ತಿಳಿಸಿ.
ನಮ್ಮ ಉತ್ತರ: ಖಂಡಿತಾ ಬೇಡ, ಮಣ್ಣಿನಪಾತ್ರೆಯಲ್ಲಿ ಸಂಗ್ರಹಿಸಿ.
ಮತ್ತು
ಅವರು ಹೇಳಿದ್ದಾರೆ
ಈ ನೀರಿನ್ನು ಬಳಸಿದ ನಂತರ ಗ್ರಾಮದ ಜನರಿಗೆ ಆಮ್ಲಪಿತ್ತ ಹೆಚ್ಚಾಗಿದೆ!!! ಎಂದು.
ಅಂದರೆ ಗ್ರಾಮದ ಜನರು, ಸೋಂಕುಗಳಿಂದ ದೂರವಾದರು, ಮೆಟಬಾಲಿಕ್ ಕಾಯಿಲೆಗಳಿಂದ ನರಳುತ್ತಿದ್ದಾರೆ….
ಪರ್ಯಾಯ ಉಪಾಯ ಏನು?
ಕಾಮಂ ಅಲ್ಪಂ, ಅಶಕ್ತೌ, ತು ಪೇಯಂ ಔಷಧ ಸಂಸ್ಕೃತಮ್ | ಪಾಷಾಣ, ರೂಪ್ಯ, ಮೃದ್ಧೇಮಜತು ತಾಪಾರ್ಕತಾಪಿತಮ್|| ಪಾನೀಯಮುಷ್ಣಂ ಶೀತಂ ವಾ ತ್ರಿದೋಷಘ್ನಂ ತೃಟ್ ಜಿತ್ ಇತಿ| ಅಷ್ಟಾಂಗ ಸೂತ್ರ ಅಧ್ಯಾಯ-6
ಸದ್ಯಕ್ಕೆ ದೀರ್ಘಕಾಲೀನ ಹಿತಕಾರಕ ಪರಿಹಾರವಾದ ಅಂತರ್ಜಲ ಹೆಚ್ಚಿಸುವುದು ಅಸಾಧ್ಯ.
ಹಾಗಾಗಿ,
ಸಧ್ಯಕ್ಕೆ ಸಿಗುತ್ತಿರುವ ಫಿಲ್ಟರ್ ನೀರಿಗೆ ಸುಣ್ಣದ ಕಲ್ಲನ್ನೋ, ಬೆಳ್ಳಿಯ-ಬಂಗಾರದ ತುಂಡನ್ನೋ ಚನ್ನಾಗಿ ಕೆಂಪಾಗುವಂತೆ ಕಾಯಿಸಿ ಒಂದು ಪಾತ್ರೆ ನೀರಿನೊಳಗೆ ಹಾಕಿ ಬಿಟ್ಟು, ಆ ನೀರು ತಿಳಿಯಾದಮೇಲೆ, ಬೆಚ್ಚಗಿರುವಂತೆ ಅಥವಾ ತಣ್ಣಗಾದಮೇಲೆ ಕುಡಿಯುವುದು ಶ್ರೇಯಸ್ಕರ
ಅಥವಾ
ಜೈನ ಮುನಿಗಳು ಮಾಡುವಂತೆ- ಅರ್ಧ ಲೀಟರ್ ನೀರಿನಲ್ಲಿ ಅರ್ಧ ಗ್ರಾಂ ಸುಣ್ಣ ಕರಗಿಸಿಡಿ, ಒಂದಿಡೀ ದಿನದಲ್ಲಿ ಬೇಕೆನಿಸಿದಾಗ ಕುಡಿಯಲು ಬಳಸಿ.
ವೈಜ್ಞಾನಿಕ ವಿವರಣೆ ಏನು?
ನೀರಿಗೆ ಕಾಯಿಸಿದ ಶುದ್ಧ ಸುಣ್ಣದ ಕಲ್ಲು, ಶುದ್ಧ ಮಣ್ಣಿನ ಹೆಂಟೆ, ಲೋಹಾದಿಗಳನ್ನು ಚನ್ನಾಗಿ ಕಾಯಿಸಿ ಹಾಕಿದರೆ- “ಆಕ್ಷೇಪ ವಿಚ್ಛೇದೈಃ”(water electrolysis) ಕ್ರಿಯೆಯಿಂದ ಪರಮಾಣು ವಿಭಜನೆಯುಂಟಾಗಿ pH ವೃದ್ಧಿಯಾವುವುದಲ್ಲದೇ, ಲಘು ಮತ್ತು ಅತ್ಯಂತ ಆರೋಗ್ಯಕರ ಜಲ ನಮ್ಮದಾಗುತ್ತದೆ.
ಹಾಗೆಯೇ ನೀರಿಗೆ ಸ್ವಲ್ಪ ಶುದ್ಧ ಸುಣ್ಣವನ್ನು ಹಾಕಿದರೂ- ನೀರಿನ pH ಹೆಚ್ಚುತ್ತದೆ.
ಆಗ
ಶರೀರದ ನಿರ್ಜಲೀಕರಣದಿಂದ ಉಂಟಾದ ನಿಶ್ಯಕ್ತಿ ದೂರವಾಗುತ್ತದೆ.
ಅಜೀರ್ಣ-ಆಮ್ಲಪಿತ್ತ ಇಲ್ಲವಾಗುತ್ತದೆ.
ಹಸಿವು ಹೆಚ್ಚುತ್ತದೆ.
ಮೂತ್ರ ಉರಿಯಂತಹ ಅನೇಕ ತೊಂದರೆಗಳು ಒಂದೆರೆಡು ಗಂಟೆಗಳಲ್ಲಿ ಪರಿಹಾರವಾಗುತ್ತವೆ.
ಮೂಳೆಗಳಿಗೆ ಸುಣ್ಣದ ಅಂಶ ಸಿಗುವ ಕಾರಣ ಗಟ್ಟಿಯಾಗುತ್ತವೆ.
ಹೈಪೋಥೈರಾಯ್ಡಿಸಮ್ ಬಾಧೆ ಕಡಿಮೆಯಾಗುತ್ತದೆ…
ಇನ್ನೂ ಅನೇಕ ಉಪಯೋಗಗಳು ನಮ್ಮದಾಗುತ್ತವೆ.
ಆತ್ಮೀಯರೇ,
ಈ ಕ್ರಿಯೆಗಳನ್ನು ನಮ್ಮ ಚಿಕಿತ್ಸಾ ಪದ್ಧತಿಗಳಲ್ಲಿ ನಿತ್ಯಕ್ರಿಯೆಗಳಲ್ಲಿ ಅಳವಡಿಸಿಕೊಂಡು ಪರಿಹಾರ ಕಂಡಿದ್ದೇವೆ. ಹಾಗಾಗಿ ನಮಗೆ ಇನ್ನಷ್ಟು ಪ್ರಮಾಣೀಕರಿಸಿ ಹೇಳಲು ಸಹಕಾರಿಯಾಗಿದೆ.
ಜೊತೆಗೂಡಿ ಬನ್ನಿ ಅನುಸರಿಸೋಣ ಮತ್ತು ಆಸ್ಪತ್ರೆಗಳಿಂದ ದೂರ ಇರೋಣ.
ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ