ಮಳೆಗಾಲದ ಮಾತು ಭಾಗ-3:ಮಳೆಗಾಲದ ಶ್ರೇಷ್ಠ ಪಂಚಕರ್ಮ ಚಿಕಿತ್ಸೆ..!
![ಮಳೆಗಾಲದ ಮಾತು ಭಾಗ-3:ಮಳೆಗಾಲದ ಶ್ರೇಷ್ಠ ಪಂಚಕರ್ಮ ಚಿಕಿತ್ಸೆ..!](https://shikarinews.com/wp-content/uploads/2020/06/images-81.jpeg)
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
✍️: ಇಂದಿನ ವಿಷಯ:- ಮಳೆಗಾಲದ ಮಾತು
ಭಾಗ-3
ಮಳೆಗಾಲದ ಶ್ರೇಷ್ಠ ಪಂಚಕರ್ಮ ಚಿಕಿತ್ಸೆ:
ಶರೀರದಲ್ಲಿ ಸಂಚಿತವಾದ ವಿಕೃತ ಮೂರೂ ದೋಷಗಳನ್ನೂ ಶಮನಗೊಳಿಸಲು ಸುಮಾರು 60 ದಿನಗಳ ಸಮಯ ಬೇಕಾಗುತ್ತದೆ. ಆದರೂ ಪೂರ್ಣ ಸ್ವಚ್ಛವಾದಂತಲ್ಲ, ಹಾಗಾಗಿ ಪ್ರತಿಯೊಬ್ಬರೂ ಶೋಧನರೂಪವಾಗಿ ಪಂಚಕರ್ಮ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದು ಅತ್ಯುತ್ತಮ
![](https://shikarinews.com/wp-content/uploads/2020/06/images-83.jpeg)
ಆಸ್ಥಾಪನಂ ಶುದ್ಧ ತನು ಜೀರ್ಣಂ………….
……ವ್ಯಕ್ತಾಮ್ಲ, ಲವಣ, ಸ್ನೇಹಂ, ಸಂಶುಷ್ಕಂ ಕ್ಷೌದ್ರವತ್ ಲಘು ||
-ಅ.ಹೃ.ಸೂತ್ರ ಸ್ಥಾನ-3
ಶುದ್ಧ ತನು:
ವಿರೇಚನದಿಂದ ಅಂದರೆ ಔಷಧಯುಕ್ತ ಬೇಧಿ ಚಿಕಿತ್ಸೆಯಿಂದ ತನುವನ್ನು(ಶರೀರವನ್ನು) ಶುದ್ಧ ಮಾಡಿಕೊಳ್ಳಬೇಕು.
ಇಲ್ಲಿ ವಿರೇಚನವು ದ್ರವರೂಪದಿಂದ ಸಂಚಿತವಾದ ಪಿತ್ತವನ್ನು ಹೊರ ಹಾಕುವುದಲ್ಲದೇ, ದೊಡ್ಡ ಕರುಳಿನಲ್ಲಿ ಸಂಚಯವಾಗಿ ಹೊಟ್ಟೆಯನ್ನು ಭಾರವಾಗುವಂತೆ ಅಥವಾ ಊದಿಕೊಳ್ಳುವ ಮಾಡುವ ವಾಯುವನ್ನೂ ಅನುಲೋಮ ಗತಿಯಿಂದ ಕೆಳಮುಖವಾಗಿ ಹೊರ ಹಾಕುತ್ತದೆ.
![](https://shikarinews.com/wp-content/uploads/2020/06/images-84.jpeg)
ನಂತರ
ಆಸ್ಥಾಪನ ಬಸ್ತಿ ಎಂಬ ಪಂಚಕರ್ಮ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕು.
ಇದು ವಾತ ಉತ್ಪತ್ತಿ ಸ್ಥಾನವನ್ನೇ ಶುದ್ಧಿಗೊಳಿಸುತ್ತದೆ ಮತ್ತು ಕಫಹರ ಔಷಧಿಗಳಿಂದ ಬಸ್ತಿಯನ್ನು ಪ್ರಯೋಗಿಸುವ ಕಾರಣ ತ್ರಿದೋಷಗಳೂ ಸಹ ಸ್ವಸ್ಥಾನದಲ್ಲಿ ತಮ್ಮಸಹಜ ಕರ್ಮಗಳನ್ನು ನಿರ್ವಹಿಸುತ್ತವೆ.
ಈ ಚಿಕಿತ್ಸೆಯ ನಂತರದ ಆರೋಗ್ಯಾನುಭೂತಿಯನ್ನು ಅನುಭವಿಸಿಯೇ ಅರಿಯಬೇಕು. ಈ ಕಾಲದಲ್ಲಿ ವ್ಯಕ್ತಿಯ ಅನುಭವಕ್ಕೆ ಬರುವ ಕೆಲ ಸಂಗತಿಗಳನ್ನು ಗಮನಿಸಿ
![](https://shikarinews.com/wp-content/uploads/2020/06/images-82.jpeg)
• ಶರೀರ 5 ವರ್ಷ ಹಿಂದೆ ಸರಿದಷ್ಟು ಉತ್ಸಾಹ ಮತ್ತು ಕಾರ್ಯಕ್ಷಮತೆಯನ್ನು ತೋರುತ್ತದೆ.
• 5-10 ವರ್ಷಗಳ ಹಿಂದಿನಂತೆ ತೆಳ್ಳಗಿನ ಶರೀರ ನಿಮ್ಮದಾಗುತ್ತದೆ, ನಿಮ್ಮ ಸ್ನೇಹಿತರು ಇದನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ.
• ಹಸಿವು ಹೆಚ್ಚುತ್ತದೆ
• ಹೊಟ್ಟೆಯುಬ್ಬರ, ಭಾರ ಇಳಿದುಹೋಗುತ್ತದೆ.
• ಕೈ ಬೆರಳುಗಳ ಊತ ಕಡಿಮೆಯಾಗಿ, ಬಿಗಿ ಹಿಡಿತ ಸಾಧ್ಯವಾಗುತ್ತದೆ.
• ನಿಮ್ಮ ಪ್ರಾಕೃತ ವರ್ಣ ಮರಳಿ ಬರುತ್ತದೆ.
• ಸೋಂಕುಗಳು ಸುಲಭವಾಗಿ ಹರಡುವುದಿಲ್ಲ
• ಮುಖದ ಕಾಂತಿ, ಸ್ವರದ ಔದಾರ್ಯ ಹೆಚ್ಚುತ್ತದೆ.
![](https://shikarinews.com/wp-content/uploads/2020/06/IMG_20200611_062841_053-1.jpg)
ವಿಶ್ವಹೃದಯಾಶೀರ್ವಾದವಂ ಬಯಸಿ
-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)