ಮುಖ್ಯಮಂತ್ರಿಗಳ ತವರು ಕ್ಷೇತ್ರದಿಂದ ತಬ್ಲಿಘಿ ಜಮಾತ್’ಗೆ ಹೋಗಿದ್ರಾ 16 ಮಂದಿ…?

ಮುಖ್ಯಮಂತ್ರಿಗಳ ತವರು ಕ್ಷೇತ್ರದಿಂದ  ತಬ್ಲಿಘಿ ಜಮಾತ್’ಗೆ ಹೋಗಿದ್ರಾ 16 ಮಂದಿ…?

ಶಿವಮೊಗ್ಗ :ಮುಖ್ಯಮಂತ್ರಿಗಳ ಕ್ಷೇತ್ರ ಶಿಕಾರಿಪುರದಿಂದ ತಬ್ಲಿಕ್ ಜಮಾತ್‌ಗೆ ಯಾರೂ ತೆರಳಿಲ್ಲ ಎನ್ನುವ ಮಾತು ಈವರೆಗೂ ಕೇಳಿಬರುತ್ತಿತ್ತು ಆದರೆ ಅದು ಸುಳ್ಳು 16 ಕ್ಕೂ ಹೆಚ್ಚು ಜನರು ದೆಹಲಿಗೆ ತೆರಳಿದ್ದರು ಎನ್ನುವುದು ಇದೀಗ ಬೆಳಕಿಗೆ ಬಂದಿದ್ದು ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಹಮದಾಬಾದ್ ನಿಂದ ಚಿತ್ರದುರ್ಗ ಮಾರ್ಗದಲ್ಲಿ ಬುಧವಾರ ಶಿವಮೊಗ್ಗ ಆಗಮಿಸುತ್ತಿದ್ದ ಎರಡು ಖಾಸಗಿ ಬಸ್‌ನ್ನು ಅಲ್ಲಿನ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ, ಬಸ್‌ನಲ್ಲಿದ್ದ 33 ಜನರೂ ಅವರೆಲ್ಲರೂ ತಬ್ಲಿಕ್ ಜಮಾತ್‌ಗೆ ತೆರಳಿದ್ದರು, ಅದರಲ್ಲಿ ನಾಲ್ವರಿಗೆ ಕೊರೊನಾ ಪಾಸಿಟೀವ್ ಬಂದಿದ್ದು ಚಿಕಿತ್ಸೆ ಪಡೆದು ಬಿಡುಗಡೆಗೊಂಡ ದಾಖಲೆಯೂ ಇದೆ.

ಈ ತಂಡದಲ್ಲಿ ಪಟ್ಟಣದ 16 ಜನರಿದ್ದಾರೆ ಎನ್ನುವುದು ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಪೊಲೀಸರು ನಡೆಸಿದ ವಿಚಾರಣೆ ವೇಳೆ ವಿಡಿಯೋ ಮಾಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ, ಮುಖ್ಯಮಂತ್ರಿಗಳಿಗೆ ಮುಟ್ಟುವವರೆಗೂ ಷೇರ್ ಮಾಡಿರಿ ಎನ್ನುವ ಟ್ಯಾಗ್‌ಲೈನ್ ಇದ್ದು.

ಈ ಕುರಿತು ಪಟ್ಟಣದಲ್ಲೂ ಹಲವು ಬಗೆಯ ಊಹಾಪೋಹ ನಡೆಯುತ್ತಿದೆ ಈ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಇನ್ನೆಷ್ಟು ಜನರು ತಬ್ಲಿಕ್ ಜಮಾತ್‌ಗೆ ತೆರಳಿದ್ದರು ಎನ್ನುವ ಕುರಿತು ತನಿಖೆ ನಡೆಸಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!