ಶಿವಮೊಗ್ಗ: ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ: ಶಾಸಕ ಬಸವನಗೌಡ ಯತ್ನಾಳ್ ..!

ಶಿವಮೊಗ್ಗ: ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ: ಶಾಸಕ ಬಸವನಗೌಡ ಯತ್ನಾಳ್ ..!

ಶಿವಮೊಗ್ಗ :ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಓರ್ವ ಡೋಂಗಿ ಸ್ವಾತಂತ್ರ್ಯ ಹೋರಾಟಗಾರನೆಂದು ಹೇಳಿಕೆ ನೀಡಿರುವ ಶಾಸಕ ಯತ್ನಾಳ್ ತಮ್ಮ ಹೇಳಿಕೆಗೆ ಬದ್ಧರಾಗಿದ್ದು ವೀರ ಸಾವರ್ಕರ್ ವಿರುದ್ಧ ಹೇಳಿಕೆ ನೀಡಿರುವ ಕಾಂಗ್ರೆಸ್ ಕ್ಷಮೆ ಕೇಳಿದಲ್ಲಿ ಮಾತ್ರ ಕ್ಷಮೆ ಕೇಳುವುದಾಗಿ ತಮ್ಮ ನಿಲುವನ್ನ ಸ್ಪಷ್ಟ ಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ನಂತರ ಮಾಧ್ಯಮಗಳಿಗೆ ಮಾತನಾಡಿದ ಶಾಸಕ ಯತ್ನಾಳ್ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್, ಇವರನ್ನ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರನೆಂದು ಒಪ್ಪಿಕೊಳ್ಳದೆ ಬಾಯಿಗೆ ಬಂದಂತೆ ಮಾತನಾಡಿದೆ. ಮೊದಲು ಬಗ್ಗೆ ಕಾಂಗ್ರೆಸ್ ಕ್ಷಮೆಯಾಚಿಸಲಿ ಎಂದು ಹೇಳಿದರು.

ಕಾಂಗ್ರೆಸ್ನವರು ಹುಬ್ಬಳಿಬೆಂಗಳೂರು ಘಟನೆ ಬಗ್ಗೆ ಮಾತನಾಡುವುದಿಲ್ಲ ದೇಶವಿರೋಧಿ ಪಾಕಿಸ್ಥಾನದ ಬಗ್ಗೆ ಹೇಳಿಕೆ ಕೊಟ್ಟ ಹೆಣ್ಣುಮಕ್ಕಳ ಬಗ್ಗೆ ಮಾತನಾಡುವುದಿಲ್ಲ ಬೇಕಿದ್ದರೇ ಕಾಂಗ್ರೆಸ್ ನವರು ದೇಶದ ವಿರುದ್ಧ ಮಾತಾನಾಡುವರ ವಿರುದ್ಧ ಹೋರಾಟ ಮಾಡಲಿ ನನ್ನ ವಿರುದ್ದ ಹೋರಾಟ ಮಾಡುವುದರಿಂದ ಯಾವುದೇ ಲಾಭವಿಲ್ಲ ಎಂದರು.

ವೀರ ಸಾರ್ವಕರ್ ಬಗ್ಗೆ ಕಾಂಗ್ರೇಸ್ ನ ರಾಷ್ಟ್ರೀಯ ಅಧ್ಯಕ್ಷರಾದಿಯಾಗಿ ಹಗುರವಾಗಿ ಮಾತನಾಡಿದ್ದಾರೆ ಮೊದಲು ಬಗ್ಗೆ ಅವರು ಜನರ ಬಳಿ ಕ್ಷಮೆ ಕೇಳಲಿ ಸಂವಿಧಾನ ಬದ್ಧವಾಗಿ ಸಿಎಎ  ಪಾರ್ಲಿಮೆಂಟ್ ನಲ್ಲಿ ಪಾಸ್ ಅಗಿದೆ ಅದರೆ ಅದರ ವಿರುದ್ದ ಪ್ರತಿಭಟನೆ ಮಾಡುವ ಕಾಂಗ್ರೆಸ್ನವರು ಮೊದಲು ಅಂಬೇಡ್ಕರ್ ಅವರ ಸಂವಿಧಾನಕ್ಕೆ ಬೆಲೆ ಕೊಡುವುದನ್ನು ಕಲಿಯಲಿ.

ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದ ಯತ್ನಾಳ್ ಕಾಂಗ್ರೇಸ್ ನವರು ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಅವರಿಗೆ ಬೇರೆ ವಿಷಯಗಳಿಲ್ಲ ಅದೇ ಕಾರಣಕ್ಕೆ ಅಧಿವೇಶನ ನಡೆಯಲು ಬಿಡಲ್ಲ ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರು ಒಳ್ಳೆಯ ಬಜೆಟ್ ಕೊಟ್ಟರೇ, ನಮ್ಮ ಅಸ್ತಿತ್ವ ಹೋಗುತ್ತದೆ ಇದೇ ಕಾರಣಕ್ಕೆ ಕಾಂಗ್ರೆಸ್ ನವರು ತಡೆಹಿಡಿಯುವ ಪ್ರಯತ್ನ ಮಾಡಲು ಹೊರಟ್ಟಿದ್ದಾರೆ ಎಂದರು.


News By Raghu Shikari
7411515737

Admin

Leave a Reply

Your email address will not be published. Required fields are marked *

error: Content is protected !!