ಪೋಲಿಸರ ಕಾರ್ಯಾಚರಣೆ ಆಕ್ರಮ ಗೋ ಸಾಗಣಿಕೆ ಮಾಡುತ್ತಿದ್ದ ಟಿಪ್ಪುನಗರ ಇಬ್ಬರು ಅಂದರ್…!
ಶಿವಮೊಗ್ಗ: ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯ ಕಾನೆಹಳ್ಳ ಸಮೀಪದಲ್ಲಿ ಪೊಲೀಸರ ಕಾರ್ಯಾಚರಣೆ ನಡೆಸಿ
ಆಕ್ರಮವಾಗಿ ಗೋವುಗಳನ್ನ ಕಳ್ಳ ಸಾಗಣಿಕೆ ಮಾಡುತ್ತಿದ್ದ ಇಬ್ಬರನ್ನು ಶಿವಮೊಗ್ಗದ ತುಂಗಾನಗರ ಪಿಎಸ್ಐ ತಿರುಮಲೇಶ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಬಂಧಿಸಲಾಗಿದೆ.
ಬೋಲೆರೋ ವಾಹನದಲ್ಲಿ ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಖದೀಮರು 50 ಸಾವಿರ ಬೆಲೆಯ 8 ಹಸುಗಳನ್ನು ಸಾಗಿಸುತ್ತಿದ್ದ ಎಂದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.
ಟಿಪ್ಪುನಗರದ ಮೊಹಮದ್(25) ಹಾಗೂ ಚಾಂದ್ ಪೀರ್( 45) ಬಂಧಿತ ಅರೋಪಿಗಳು ಶಿವಮೊಗ್ಗದ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.