ಸುರಗಿಹಳ್ಳಿ ಗ್ರಾಮಸ್ಥರು ಮೇಲೆ ಅರಣ್ಯಾಧಿಕಾರಿಗಳ ದೌರ್ಜನ್ಯ ಖಂಡನೀಯ: ಶಾಸಕ ಬಿವೈ ವಿಜಯೇಂದ್ರ
ಶಿಕಾರಿಪುರ ತಾಲೂಕಿನ ಸುರಗಿಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನ ರಥ ನಿರ್ಮಾಣಕ್ಕೆ ಮರ ಕಡಿಯಲು ಅನುಮತಿ ಪಡೆದು ಮರವನ್ನು ಸಾಗಿಸುವ ವೇಳೆ ಪಾರ್ಮಿಟ್ ಇಲ್ಲವೆಂದು ಗ್ರಾಮಸ್ಥರ ಮೇಲೆ ಅರಣ್ಯ ಅಧಿಕಾರಿಗಳ ಹಲ್ಲೆ ದೌರ್ಜನ್ಯ ಖಂಡನೀಯ ಎಂದು ಶಾಸಕ ಬಿವೈ ವಿಜಯೇಂದ್ರ ಹೇಳಿದರು.
ಸುರಗಿಹಳ್ಳಿ ಗ್ರಾಮದಲ್ಲಿ ದೇವಸ್ಥಾನಸ ರಥಕ್ಕೆ ಅನುಮತಿ ಪಡೆದು ಮರಗಳನ್ನು ತೆಗೆದುಕೊಂಡು ಹೊಗುಲು ವೇಳೆ ಅರಣ್ಯ ಅಧಿಕಾರಗಳು ದೇವಸ್ಥಾನ ಸಮಿತಿಯವರ ಮತ್ತು ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ ಇದು ಅಧಿಕಾರಿಗಳ ದೌರ್ಜನ್ಯ ದಬ್ಬಾಳಿಕೆಗೆ ಸಾಕ್ಷಿಯಾಗಿದೆ ಎಂದರು.
ಈ ಕೂಡಲೇ ತನಿಖೆ ನಡೆಸಿ ಹಲ್ಲೆ ಮಾಡಿದ ಅಧಿಕಾರಿಗಳನ್ನು ಅಮಾನತ್ತು ಮಾಡವಂತೆ ಶಾಸಕ ಬಿವೈ ವಿಜಯೇಂದ್ರ ಒತ್ತಾಯಿಸಿ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
News by: Raghu Shikari-7411515737