ಮತದಾನ ಮಾಡಲು ಹೊರಟಿದ ವ್ಯಕ್ತಿಗೆ ಬಸ್ ಡಿಕ್ಕಿ ಸ್ಥಳದಲ್ಲೇ ಸಾವು..!
![ಮತದಾನ ಮಾಡಲು ಹೊರಟಿದ ವ್ಯಕ್ತಿಗೆ ಬಸ್ ಡಿಕ್ಕಿ ಸ್ಥಳದಲ್ಲೇ ಸಾವು..!](https://shikarinews.com/wp-content/uploads/2024/05/IMG-20240507-WA0008.jpg)
ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದ ಬಳಿ ಬೈಕ್ -ಬಸ್ ನಡುವೆ ಡಿಕ್ಕಿ ಸಂಭವಿಸಿ ವ್ಯಕ್ತಿಯೋರ್ವನು ಸ್ಥಳದಲ್ಲಿಯೇ ಸಾವನ್ನಾಪಿದ ಘಟನೆ ಇಂದು ಮಾಧ್ಯಹ್ನ 12 ಗಂಟೆ ಸುಮಾರಿಗೆ ನಡೆದಿದೆ.
![](https://shikarinews.com/wp-content/uploads/2024/05/IMG-20240507-WA0009-1024x471.jpg)
ಮೃತ ವ್ಯಕ್ತಿ ಮಂಜುನಾಥ್ (32) ಮೂಲತಃ ಭದ್ರಾವತಿ ತಾಲೂಕಿನವರು ಎನ್ನಲಾಗಿದ್ದು ಇಂದು ಚುನಾವಣಾ ಮತದಾನ ಇರುವುದರಿಂದ ತನ್ನ ಅಕ್ಕನ ಮನೆ ಚುರ್ಚುಗುಂಡಿಯಿಂದ ಭದ್ರಾವತಿಗೆ ಬೈಕ್ ನಲ್ಲಿ ತೆರಳುವ ವೇಳೆ ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.