ಶಿವಮೊಗ್ಗದ ಮೂವರಿಗೆ ನಿಮಗ ಮಂಡಳಿ ಸ್ಥಾನ: ಆರ್ ಎಂಎಂಗೆ ಎಂಎಡಿಬಿ, ಸೂಡಗೆ ಸುಂದರೇಶ್,ಸಾಂಬಾರ ನಿಗಮಕ್ಕೆ ಪಲ್ಲವಿ…!
![ಶಿವಮೊಗ್ಗದ ಮೂವರಿಗೆ ನಿಮಗ ಮಂಡಳಿ ಸ್ಥಾನ: ಆರ್ ಎಂಎಂಗೆ ಎಂಎಡಿಬಿ, ಸೂಡಗೆ ಸುಂದರೇಶ್,ಸಾಂಬಾರ ನಿಗಮಕ್ಕೆ ಪಲ್ಲವಿ…!](https://shikarinews.com/wp-content/uploads/2024/02/IMG-20240229-WA0001.jpg)
ಶಿವಮೊಗ್ಗ ಜಿಲ್ಲೆಯ ಮೂರು ಜನ ಕಾಂಗ್ರೆಸ್ ಮುಖಂಡರಿಗೆ ವಿವಿಧ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸಿದೆ.
![](https://shikarinews.com/wp-content/uploads/2024/02/IMG-20240229-WA0045.jpg)
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರಿಗೆ (ಸೂಡ) ಶಿವಮೊಗ್ಗ ಭದ್ರಾವತಿ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
![](https://shikarinews.com/wp-content/uploads/2024/02/IMG-20240229-WA0002.jpg)
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ತೀರ್ಥಹಳ್ಳಿಯ ಡಾ.ಆರ್ ಎಂ ಮಂಜುನಾಥ ಗೌಡ ಅವರಿಗೆ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿಲಾಗಿದ್ದು
![](https://shikarinews.com/wp-content/uploads/2024/02/IMG-20240229-WA0005.jpg)
ಕಾಂಗ್ರೆಸ್ ವಕ್ತಾರೆ ಜಿ.ಪಲ್ಲವಿ ಅವರನ್ನು ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಡಾ.ಅಂಶುಮಂತ್ ಅವರನ್ನು ಭದ್ರಾ ಕಾಡಾ ಅಧ್ಯಕ್ಷರಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.