ಯುವಾಬ್ರಿಗೇಡ್’ನಿಂದ ಹುಚ್ಚರಾಯಸ್ವಾಮಿ ದೇವಸ್ಥಾನ ಸ್ವಚ್ಚತೆ ರಾಮಮಂದಿರಕ್ಕೆ ಮೃತ್ತಿಕೆ ಸಂಗ್ರಹ
![ಯುವಾಬ್ರಿಗೇಡ್’ನಿಂದ ಹುಚ್ಚರಾಯಸ್ವಾಮಿ ದೇವಸ್ಥಾನ ಸ್ವಚ್ಚತೆ ರಾಮಮಂದಿರಕ್ಕೆ ಮೃತ್ತಿಕೆ ಸಂಗ್ರಹ](https://shikarinews.com/wp-content/uploads/2023/06/IMG-20230625-WA0023.jpg)
ಶಿಕಾರಿಪುರ: ಯುವಾಬ್ರಿಗೇಡ್ ಶಿಕಾರಿಪುರ ವತಿಯಿಂದ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನದ ಆವರಣವನ್ನು ಯುವ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಚಗೊಳಿಸಿದರು.
![](https://shikarinews.com/wp-content/uploads/2023/06/IMG-20230625-WA0027.jpg)
ತಾಲೂಕ್ ಸಂಚಾಲಕ ನವೀನ್ ಮಾತನಾಡಿ 500 ವರ್ಷಗಳ ಕದನದ ಬಳಿಕ ಜನವರಿಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗಲಿದೆ.
![](https://shikarinews.com/wp-content/uploads/2023/06/IMG-20230625-WA0011.jpg)
ಹನುಮ ನಾಡಿನ ನಾವು ಒಂದು ಸಂಕಲ್ಪ ಕೈಗೊಳ್ಳುತ್ತಿದ್ದೇವೆ ಯುವಾಬ್ರಿಗೇಡ್ ವತಿಯಿಂದ ಈ ಭಾನುವಾರ ಶಿಕಾರಿಪುರದ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನವನ್ನು ಸ್ವಚ್ಛಗೊಳಿಸಿ ಮೃತ್ತಿಕೆ ಸಂಗ್ರಹಿಸಿ ನಂತರ ಮೃತ್ತಿಕೆಯನ್ನು ಅಯೋಧ್ಯೆಯ ರಾಮ ಮಂದಿರಕ್ಕೆ ತಲುಪಿಸಲಿದ್ದೇವೆ ಎಂದರು.
![](https://shikarinews.com/wp-content/uploads/2023/06/IMG-20230625-WA0015.jpg)
ಈ ವೇಳೆ ರಾಮ ಮಂದಿರಕ್ಕೆ ಹನುಮ ನಾಡಿನ ಮೃತ್ತಿಕೆ ಕಳುಹಿಸುವ ಕಾರ್ಯಕ್ರಮ ನಡೆಸಿದ್ದು ಶ್ರೀ ಹುಚ್ಚರಾಯ ಸ್ವಾಮಿ ಸನ್ನಿದಾನದಲ್ಲಿ ಮೃತ್ತಿಕೆ( ಪವಿತ್ರ ಮಣ್ಣು) ಸಂಗ್ರಹ ಮಾಡಿ ಪೂಜೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ನ ತಾಲೂಕ್ ಸಂಚಾಲಕ ನವೀನ್, ಸದಸ್ಯರಾದ ಡಾ.ಮಹೇಂದ್ರ, ಚಂದ್ರು ,ವಿಶ್ವನಾಥ್, ತುಕರಾಮ್,ಸಂತೋಷ್, ಗಿರೀಶ್, ರಘು ಶಿಕಾರಿ ಇದ್ದರು.
News By: Raghu Shikari-7411515737