ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಶಿಕಾರಿಪುರದಲ್ಲಿ ಸಂಭ್ರಮಾಚರಣೆ..!
![ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಶಿಕಾರಿಪುರದಲ್ಲಿ ಸಂಭ್ರಮಾಚರಣೆ..!](https://shikarinews.com/wp-content/uploads/2023/05/IMG20230520120644.jpg)
ಶಿಕಾರಿಪುರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದು ಇಂದು ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಸಂಭ್ರಮಿಸಿದರು.
![](https://shikarinews.com/wp-content/uploads/2023/05/IMG-20230520-WA0024.jpg)
ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಪೂಜೆಯನ್ನು ಸಲ್ಲಿಸಿದರು.
![](https://shikarinews.com/wp-content/uploads/2023/05/918105697964_status_61355b18fed3435fa33aa18ac95d7d7d.jpg)
ಕನಕ ಪಾರ್ಕ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಕನಕದಾಸರ ಮೂರ್ತಿಗೆ ಹಾರವನ್ನು ಹಾಕಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಖುಷಿಯನ್ನು ಸಂಭ್ರಮಿಸಿದರು.
![](https://shikarinews.com/wp-content/uploads/2023/05/918105697964_status_7c244ead66494d99a5a5f9fc233aa2a4.jpg)
ಪ್ರಮುಖ ಬೀದಿಗಳಲ್ಲಿ ಎಸ್ ಪಿ ನಾಗರಾಜ್ ಗೌಡ ಅಭಿಮಾನಿ ಬಳಗದ ವತಿಯಿಂದ ಸಿದ್ದರಾಮಯ್ಯ,ಡಿಕೆ ಶಿವಕುಮಾರ್ ಕಾಂಗ್ರೆಸ್ ಸರ್ಕಾರಕ್ಕೆ ಜೈಕಾರ ಹಾಕುತ್ತಾ ಪಟಾಕಿ ಸಿಡಿಸಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಖುಷಿಯನ್ನು ಸಂಭ್ರಮಾಚರಣೆ ನಡೆಸಿದರು.
News by: Raghu Shikari-7411515737