ಒಳ ಮೀಸಲಾತಿ ಕಿಚ್ಚು ಬೃಹತ್ ಪ್ರತಿಭಟನೆ ಬಿಎಸ್ ಯಡಿಯೂರಪ್ಪನವರ ಮನೆಗೆ ಕಲ್ಲು ತೂರಾಟ.!

ಒಳ ಮೀಸಲಾತಿ ಕಿಚ್ಚು ಬೃಹತ್ ಪ್ರತಿಭಟನೆ ಬಿಎಸ್ ಯಡಿಯೂರಪ್ಪನವರ ಮನೆಗೆ ಕಲ್ಲು ತೂರಾಟ.!

ಶಿಕಾರಿಪುರ : ಪಟ್ಟಣದ ಕಿರಣ್ ಟಾಕೀಸ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಯಿಂದ ಆರಂಭಗೊಂಡ ಪ್ರತಿಭಟನಾಗಾರರ ಮೆರವಣಿಗೆಯೂ ಅಂಬೇಡ್ಕರ್ ವೃತ್ತದ ಬಳಿ ಬಸ್ ನಿಲ್ದಾಣದ ಬಳಿ ಮಾಜಿ‌ ಸಿಎಂ ಬಿ ಎಸ್ ಯಡಿಯೂರಪ್ಪರವರ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರ ಭಾವಚಿತ್ರಕ್ಕೆ ಬೆಂಕಿ ಹಚ್ಚುವುದಲ್ಲದೇ, ಇತ್ತೀಚೆಗೆ ಬಿ ಎಸ್ ಯಡಿಯೂರಪ್ಪರವರ ಹುಟ್ಟು ಹಬ್ಬಕ್ಕೆ ನೀಡಿದ ಅನೇಕ ಸೀರೆಗಳನ್ನು ಬೆಂಕಿಯಲ್ಲಿ ಹಾಕುವುದರ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲಲ್ಲಿ ಬೆಂಕಿ ಹಚ್ಚುವ ಮೂಲಕ ಸಾಗಿದ ಮೆರವಣಿಗೆ ಪಟ್ಟಣದ ಮಾಳೇರ ಕೇರಿಯಲ್ಲಿರುವ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪರವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದರು.

ಇದಕ್ಕೆ ಜಗ್ಗದ ಪ್ರತಿಭಟನಾಗಾರರು ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿದರು ಇದಕ್ಕೆ ಪೋಲೀಸ್ ಸಿಬ್ಬಂದಿಗಳು ಪ್ರತಿಭಟನಾಕಾರರನ್ನು ನಿಯಂತ್ರಿಸಲಾಗಿಲಿಲ್ಲ.

ನಂತರ ಪ್ರತಿಭಟನಾ ಮೆರವಣಿಗೆ ಮಾಜಿ‌ ಸಿಎಂ ಬಿ ಎಸ್ ಯಡಿಯೂರಪ್ಪರವರ ಮನೆ ಹಾಗೂ ಬಿಜೆಪಿ ಪಕ್ಷದ ಕಛೇರಿಗೆ ನುಗ್ಗಿ ಕಛೇರಿಯ ಮೇಲಿರುವ ಬಿಜೆಪಿ ಪಕ್ಷದ ಬಾವುಟ ತೆಗೆದು ಬಂಜಾರಾ ಸಮಾಜದ ಬಾವುಟ ಪ್ರದರ್ಶಿಸಿದರು.

ಈ ವೇಳೆ ಉದ್ರಿಕ್ತ ಗೊಂಡ ಪ್ರತಿಭಟನಾಕಾರರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ನಿವಾಸಕ್ಕೆ ಕಲ್ಲುತೂರಾಟ ನಡೆಸಿದ್ದು ಇದರಿಂದ ಕಿಟಕಿಯ ಗಾಜುಗಳು ಪುಡಿ ಆಗಿದೆ.

ಯಡಿಯೂರಪ್ಪನವರ ಹುಟ್ಟುಹಬ್ಬದ ಪ್ರಯುಕ್ತವಾಗಿ ವಿತರಿಸಲಾಗಿದ್ದ ಸೀರೆಗಳನ್ನು ಸುಟ್ಟು ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದರು

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!