ಶಿವಮೊಗ್ಗ ಜಿಲ್ಲೆಯಿಂದ 23 ಮಂದಿಗೆ ಗಡಿಪಾರು ಪಟ್ಟಿ ಸಿದ್ದತೆ : ಶಿವಮೊಗ್ಗ ಎಸ್.ಪಿ ಮಿಥುನ್ ಕುಮಾರ್
![ಶಿವಮೊಗ್ಗ ಜಿಲ್ಲೆಯಿಂದ 23 ಮಂದಿಗೆ ಗಡಿಪಾರು ಪಟ್ಟಿ ಸಿದ್ದತೆ : ಶಿವಮೊಗ್ಗ ಎಸ್.ಪಿ ಮಿಥುನ್ ಕುಮಾರ್](https://shikarinews.com/wp-content/uploads/2022/11/20221106_132321.jpg)
ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲು ಮುಂದಾಗಿದೆ . ಹಲವರ ಗಡಿಪಾರು ಮಾಡಲು ಪಟ್ಟಿ ಸಿದ್ಧತೆ ನಡೆಸಲಾಗಿದೆ . ಹಲವರ ಜಾಮೀನು ರದ್ಧತಿಗು ಕೋರ್ಟ್ ಗೆ ಮನವಿ ಸಲ್ಲಿಸಲು ಯೋಜಿಸಲಾಗಿದೆ
![](https://shikarinews.com/wp-content/uploads/2022/11/images-89.jpeg)
ಈ ಕುರಿತು ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು , ಜಿಲ್ಲೆಯಿಂದ 23 ಮಂದಿಯನ್ನು ಗಡಿಪಾರು ಮಾಡಲು ಪೊಲೀಸ್ ಇಲಾಖೆ ಪಟ್ಟಿ ಸಿದ್ಧಪಡಿಸಲಾಗಿದೆ . ಈಗಾಗಲೇ ಮೂರು ಮಂದಿಯನ್ನು ಗಡಿಪಾರಿಗೆ ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ ಎಂದು ತಿಳಿಸಿದರು .
![](https://shikarinews.com/wp-content/uploads/2022/10/photo_2022-10-31_08-44-15-1024x576.jpg)
ಜಾಮೀನಿನ ಮೇಲೆ ಹೊರಗೆ ಬಂದು ದುಷ್ಕೃತ್ಯಗಳನ್ನು ಎಸಗುತ್ತಿರುವವರ ವಿರುದ್ಧವು ಕಠಿಣ ಕ್ರಮ ಕೈಗೊಳ್ಳಲು ಪೋಲಿಸ್ ಇಲಾಖೆ ಮುಂದಾಗಿದೆ . ‘ ಜಾಮೀನಿನ ಮೇಲೆ ಹೊರ ಬಂದು ಮತ್ತೆ ದುಷ್ಕೃತ್ಯಗಳನ್ನು ಮಾಡುತ್ತಿದ್ದರೆ , ಅಂತಹವರ ಪತ್ತೆ ಮಾಡಿ ಜಾಮೀನು ರದ್ದು ಮಾಡಲು ಸೂಚಿಸಲಾಗುವುದು ಎಂದು ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು .
News by Raghu shikari-7411515737