ಶಿಕಾರಿಪುರ : ವಾಲ್ಮಿಕಿ ಸಮಾಜಕ್ಕೆ ಮೀಸಲಾತಿ ಒತ್ತಾಯಿಸಿ ಬೆಂಗಳೂರು ಚಲೋ: ಹನುಮಂತಪ್ಪ

ಶಿಕಾರಿಪುರ : ವಾಲ್ಮಿಕಿ ಸಮಾಜಕ್ಕೆ ಮೀಸಲಾತಿ ಒತ್ತಾಯಿಸಿ ಬೆಂಗಳೂರು ಚಲೋ: ಹನುಮಂತಪ್ಪ

ಶಿಕಾರಿಪುರ: ವಾಲ್ಮಿಕಿ ಸಮಾಜಕ್ಕೆ ಮೀಸಲಾತಿ ಒತ್ತಾಯಿಸಿ ನಮ್ಮ ಸಮಾಜ ಶ್ರೀಗಳು ಬೆಂಗಳೂರು ನಲ್ಲಿ 229 ದಿನಗಳ ಕಾಲ ಸತ್ಯಾಗ್ರಹ ಮಾಡುತ್ತಿದ್ದಾರೆ.

ಸರ್ಕಾರ ಈ ಬಗ್ಗೆ ಯಾವುದೇ ಗಮನ ನೀಡಿಲ್ಲ ಸರ್ಕಾರ ಕೂಡಲೇ ಸ್ಪಂದಿಸದೇ ಇದ್ದಾರೆ ಬೆಂಗಳೂರು ಚಲೋ‌ ನಡೆಸಲಾಗುತ್ತದೆ ಎಂದು ತಾಲೂಕ್ ವಾಲ್ಮಿಕಿ ಸಮಾಜದ ಅಧ್ಯಕ್ಷರಾದ ಹನುಮಂತಪ್ಪ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ವಾಲ್ಮಿಕಿ ಸಮಾಜ ಬೇಡಿಕೆ 7.% ರಷ್ಟು ಮೀಸಲಾತಿ ನೀಡಬೇಕು ಎಂದು ಬೇಡಿಕೆ ಇಟ್ಟುಕೊಂಡು ನಾವು ಪ್ರತಿಭಟನೆ ಸತ್ಯಾಗ್ರಹ ನಡೆಸುತ್ತಿದ್ದೇವೆ ಎಂದರು.

ಬೇಡಿಕೆಗೆ ಸರ್ಕಾರ ಸ್ಪಂದಿಸದೇ ಇದ್ದಾರೆ ಅ.9ನೇ ತಾರೀಕು ಬೆಂಗಳೂರು ಚಲೋ ನಡೆಸಲಾಗುವುದು ರಾಜ್ಯದ ಎಲ್ಲಾ ಭಾಗದಿಂದ ಸಮಾಜದ ಜನತೆ ಬೃಹತ್ ಪ್ರತಿಭಟನೆ ಭಾಗಹಿಸಲಿದ್ದಾರೆ.

ತಾಲೂಕ್ ಆಡಳಿತದಿಂದ ನಡೆಸುವ ವಾಲ್ಮಿಕಿ ಜಯಂತಿ ಆಚರಣೆಯನ್ನು ಸಮಾಜದ ವತಿಯಿಂದ ಬಹಿಷ್ಕಾರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಸ್ಥಾಪಕ ಅಧ್ಯಕ್ಷರಾದ ಹೆಚ್ ಡಿ ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಸುರೇಶ್, ಉಪಾಧ್ಯಕ್ಷ ಸುರೇಶ್ ನಿಂಬೆಗುಂದಿ, ನಾಗರಾಜ್ ಗೌಡ್ರು, ಹೆಚ್ ಸಿ ಉಮೇಶ್, ಮಾರವಳ್ಳಿ ಉಮೇಶ್, ರಾಜಪ್ಪ,ಇದ್ದರು‌.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!