ಚಿಕ್ಕಮಗಳೂರು: ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯಕ್ಷೆ…!
![ಚಿಕ್ಕಮಗಳೂರು: ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯಕ್ಷೆ…!](https://shikarinews.com/wp-content/uploads/2022/09/IMG_20220902_163719_842.jpg)
ಚಿಕ್ಕಮಗಳೂರು : ಗಣೇಶ ಹಬ್ಬದ ಆಚರಣೆ ಎಂದರೆ ಹಿಂದುಗಳ ಶ್ರದ್ಧಾ ಭಕ್ತಿ ಸಂಭ್ರಮಕ್ಕೆ ಸಾಕ್ಷಿಯಾಗಿರುತ್ತದೆ.
ಇಡೀ ಜಗತ್ತೇ ಧರ್ಮಗಳ ನಡುವಿನ ವೈಶಮ್ಯಗಳನ್ನು ತೋರುತ್ತಿರುವ ದಿನಗಳಲ್ಲಿ ಸರ್ವಧರ್ಮದ ಸಮನ್ವಯತೆಯನ್ನು ಕಾಣುವ ವಿಶೇಷ ಚಿಕ್ಕಮಂಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನಲ್ಲಿ ನಡೆದಿದೆ.
![](https://shikarinews.com/wp-content/uploads/2022/09/IMG-20220902-WA0036-1024x579.jpg)
ಹೌದು ಎನ್ ಆರ್ ಪುರ ಪಟ್ಟಣದ ರಾಜೀವ ನಗರದ ಗಣಪತಿ ಸೇವಾ ಸಮಿತಿಗೆ 13 ವರ್ಷಗಳಿಂದ ಮುಸ್ಲಿಂ ಸಮುದಾಯದ ಜಬೇದಾ ಎನ್ನುವ ಮಹಿಳೆ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
![](https://shikarinews.com/wp-content/uploads/2022/09/IMG-20220902-WA0034-1024x584.jpg)
ಪ್ರಸ್ತುತ ಎನ್ಆರ್ ಪುರ ಪಟ್ಟಣದ ಪುರಸಭೆ ಅಧ್ಯಕ್ಷರಾಗಿದ್ದು ಅನೇಕ ಸಾಮಾಜಿಕ ಸೇವೆಯಲ್ಲಿ ಜಾತಿ ಧರ್ಮಗಳನ್ನು ಮೀರಿ ಕೆಲಸವನ್ನು ಮಾಡುತ್ತಿದ್ದಾರೆ.
ಈ ರೀತಿ ಸಮಾಜಿಕ ಕಾರ್ಯ ಸೌಹಾರ್ದತೆಗೆ ಹೆಸರಾಗಿರುವ ಜುಬೇದಾ ಅವರಿಗೆ ನಾಡಿನಾದ್ಯಂತ ಮೆಚ್ವುಗೆ ವ್ಯಕ್ತವಾಗಿದೆ.
News By: Raghu Shikari-7411515737