ಒಂದು ಲಕ್ಷ ಮತಗಳ ಅಂತರದಿಂದ ವಿಜಯೇಂದ್ರರನ್ನು ಗೆಲ್ಲಿಸುವಂತೆ ಬಿಎಸ್’ವೈ ಮನವಿ
![ಒಂದು ಲಕ್ಷ ಮತಗಳ ಅಂತರದಿಂದ ವಿಜಯೇಂದ್ರರನ್ನು ಗೆಲ್ಲಿಸುವಂತೆ ಬಿಎಸ್’ವೈ ಮನವಿ](https://shikarinews.com/wp-content/uploads/2022/07/IMG20220722130837-1.jpg)
ಶಿಕಾರಿಪುರ ತಾಲೂಕಿನ ಜೀವನಾಡಿ ಅಂಜನಾಪುರ ಜಲಾಶಯಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಶುಕ್ರವಾರ ಬಾಗಿನವನ್ನು ಅರ್ಪಿಸಿದರು.
ಶಿಕಾರಿಪುರ ತಾಲೂಕಿನಿಂದಲ್ಲೇ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಬಿ.ಎಸ್ ಯಡಿಯೂರಪ್ಪ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.
![](https://shikarinews.com/wp-content/uploads/2022/07/IMG20220722140242-1024x576.jpg)
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ವಿಜಯೇಂದ್ರ ಶಿಕಾರಿಪುರದಿಂದಲ್ಲೆ ಸ್ಪರ್ಧಿಸುತ್ತಾರೆ ಒಂದು ಲಕ್ಷ ಮತಗಳಿಂದ ಗೆಲ್ಲಿಸಬೇಕು ಎಂದು ತಾಲೂಕಿನ ಜನತೆಗೆ ಮನವಿ ಮಾಡಿದರು.
![](https://shikarinews.com/wp-content/uploads/2022/07/IMG20220722130837-1024x576.jpg)
ಕಾಂಗ್ರೆಸ್ ಪಕ್ಷ ಮುಳುಗುವ ಹಡಗು ಯಾವುದೇ ಕಾರಣಕ್ಕೂ ಅವರು ಅಧಿಕಾರಕ್ಕೆ ಬರುವುದಿಲ್ಲ
ಕಾಂಗ್ರೆಸ್ ಪಕ್ಷದ ಅಧಿಕಾರ ಅವಧಿಯಲ್ಲಿ ಸಾಕಷ್ಟು ಲೂಟಿ ಮಾಡಿದ್ದು ನಿನ್ನೆ ರಮೇಶ್ ಕುಮಾರ್ ಹೇಳಿರುವ ಹೇಳಿಕೆ ಅದಕ್ಕೆ ಪೂರಕವಾಗಿದೆ ಎಂದರು.
![](https://shikarinews.com/wp-content/uploads/2022/07/IMG20220722134345-1024x576.jpg)
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ಎಂಎಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ಸಾಗರ ಎಸಿ ಪಲ್ಲವಿ, ಎಂಬಿ ಚನ್ನವೀರಪ್ಪ, ರೇಖಾಬಾಯಿ ಅನೇಕ ಮುಖಂಡರು ಕಾರ್ಯಕರ್ತರು ಇದ್ದರು.
News By: Raghu Shikari-7411515737