ಒಂದು ಲಕ್ಷ ಮತಗಳ ಅಂತರದಿಂದ ವಿಜಯೇಂದ್ರರನ್ನು ಗೆಲ್ಲಿಸುವಂತೆ ಬಿಎಸ್’ವೈ ಮನವಿ

ಒಂದು ಲಕ್ಷ ಮತಗಳ ಅಂತರದಿಂದ ವಿಜಯೇಂದ್ರರನ್ನು ಗೆಲ್ಲಿಸುವಂತೆ ಬಿಎಸ್’ವೈ ಮನವಿ

ಶಿಕಾರಿಪುರ ತಾಲೂಕಿನ ಜೀವನಾಡಿ ಅಂಜನಾಪುರ ಜಲಾಶಯಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಶುಕ್ರವಾರ ಬಾಗಿನವನ್ನು ಅರ್ಪಿಸಿದರು‌.

ಶಿಕಾರಿಪುರ ತಾಲೂಕಿನಿಂದಲ್ಲೇ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಬಿ.ಎಸ್ ಯಡಿಯೂರಪ್ಪ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ‌.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ವಿಜಯೇಂದ್ರ ಶಿಕಾರಿಪುರದಿಂದಲ್ಲೆ ಸ್ಪರ್ಧಿಸುತ್ತಾರೆ ಒಂದು ಲಕ್ಷ ಮತಗಳಿಂದ ಗೆಲ್ಲಿಸಬೇಕು ಎಂದು ತಾಲೂಕಿನ ಜನತೆಗೆ ಮನವಿ ಮಾಡಿದರು‌.

ಕಾಂಗ್ರೆಸ್ ಪಕ್ಷ ಮುಳುಗುವ ಹಡಗು ಯಾವುದೇ ಕಾರಣಕ್ಕೂ ಅವರು ಅಧಿಕಾರಕ್ಕೆ ಬರುವುದಿಲ್ಲ
ಕಾಂಗ್ರೆಸ್ ಪಕ್ಷದ ಅಧಿಕಾರ ಅವಧಿಯಲ್ಲಿ ಸಾಕಷ್ಟು ಲೂಟಿ ಮಾಡಿದ್ದು ನಿನ್ನೆ ರಮೇಶ್ ಕುಮಾರ್ ಹೇಳಿರುವ ಹೇಳಿಕೆ ಅದಕ್ಕೆ ಪೂರಕವಾಗಿದೆ‌ ಎಂದರು‌‌.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ಎಂಎಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ಸಾಗರ ಎಸಿ ಪಲ್ಲವಿ, ಎಂಬಿ ಚನ್ನವೀರಪ್ಪ, ರೇಖಾಬಾಯಿ ಅನೇಕ ಮುಖಂಡರು ಕಾರ್ಯಕರ್ತರು ಇದ್ದರು‌‌.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!