ತೀರ್ಥಹಳ್ಳಿ:ಕಾಂಗ್ರೇಸ್ ಕಾರ್ತಕರ್ತರ‌ ಮೇಲೆ ಕಿಮ್ಮನೆ ಗರಂ ಗುಡ್ಡೆಕೊಪ್ಪದ ಸಚಿವರ ಮನೆ ಮುಂದೆ ಆಗಿದ್ದೇನು?

ತೀರ್ಥಹಳ್ಳಿ:ಕಾಂಗ್ರೇಸ್ ಕಾರ್ತಕರ್ತರ‌ ಮೇಲೆ ಕಿಮ್ಮನೆ ಗರಂ ಗುಡ್ಡೆಕೊಪ್ಪದ ಸಚಿವರ ಮನೆ ಮುಂದೆ ಆಗಿದ್ದೇನು?

ತೀರ್ಥಹಳ್ಳಿ: ಬಿಜೆಪಿ ಪಕ್ಷದ ದುರಾಡಳಿತ, 40 % ಕಮಿಷನ್ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಕುರಿತು ಇಂದಿನಿಂದ 4 ದಿನಗಳ ಪರ್ಯಂತ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ನೆಡೆಯುತ್ತಿರುವ ಪಾದಯಾತ್ರೆಯ ಸಂದರ್ಭದಲ್ಲಿ ತಮ್ಮ ಸಜ್ಜನಿಕೆಯನ್ನು ಉಳಿಸುಕೊಂಡಿದ್ದಾರೆ ಎಂಬುವುದಕ್ಕೆ ಗುಡ್ಡೆಕೊಪ್ಪದ ಗೃಹಸಚಿವರ ಮನೆಯ ಎದುರು ತಮ್ಮ ಕಾರ್ಯಕರ್ತರ ಮೇಲೆ ಗರಂ ಆಗಿದ್ದು ನಿದರ್ಶನವಾಗಿದೆ.

ಯಾವುದೇ ರಾಜಕೀಯ ಎದುರಾಳಿ ವಿರುದ್ಧ ಪ್ರತಿಭಟಿಸುವಾಗಲು ಅವರ ಮನೆ ಬಳಿ ಕುಟುಂಬದ ಸದಸ್ಯರ ಎದುರು ದಿಕ್ಕಾರ ಕೂಗಬಾರದೆಂಬ ಕಿಮ್ಮನೆ ನಿಲುವು ಮೆಚ್ಚುವಂತಹದ್ದು.

ಕಿಮ್ಮನೆಯವರ ಈ ನಿಲುವನ್ನು ನೋಡಿ ಅನೇಕ ರಾಜಕಾರಣಿಗಳು ಕಿಮ್ಮನೆ ರತ್ನಾಕರ್ ಅವರನ್ನು ನೋಡಿ ಕಲಿಯಬೇಕಿದೆ.

ಗುಡ್ಡೆಕೊಪ್ಪದ ಸಚಿವರ ಮನೆ ಮುಂದೆ ಆಗಿದ್ದೇನು?

ತಾಲೂಕಿನ ಗುಡ್ಡೇಕೊಪ್ಪ ಗ್ರಾಮಪಂಚಾಯಿತಿಯಿಂದ ಹೊರಟ ಪಾದಯಾತ್ರೆ ಗೃಹಸಚಿವ ಆರಗ ಜ್ಞಾನೇಂದ್ರರವರ ಮನೆಯ ಮುಂದೆ ತಿರುವಿನ ಬಳಿ ಬರುತ್ತಿದ್ದಂತೆ ಕಾರ್ಯಕರ್ತರು ಡ್ರಮ್ ಬಾರಿಸಲು ಶುರುಮಾಡಿದರು. ಇದರಿಂದ ಕೋಪಗೊಂಡ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ನಾನು ಪಾದಯಾತ್ರೆ ಮಾಡುವುದಿಲ್ಲ ವಾಪಾಸಾಗುತ್ತೇನೆಂದು ಗರಂ ಆಗಿದ್ದಾರೆ.

ನಂತರ ಕಿಮ್ಮನೆ ರತ್ನಾಕರ್ ಮಾತಿಗೆ ಬೆಲೆಕೊಟ್ಟ ಕಾರ್ಯಕರ್ತರು ಡೊಳ್ಳು ಬಾರಿಸುವುದು ಬಂದ್ ಮಾಡಿ ಗೃಹಸಚಿವರ ಮನೆ ತಿರುವಿನಿಂದ 50 ಮೀಟರ್ ದೂರದ ನಂತರ ಡೊಳ್ಳು ಬಾರಿಸಿ ಪಾದಯಾತ್ರೆ ಮುಂದುವರೆಸಿದರು.

ಒಟ್ಟಿನಲ್ಲಿ ಈ ಘಟನೆ ಕಿಮ್ಮನೆ ರತ್ನಾಕರ್ ಅವರ ಸಜ್ಜನಿಕೆಯ ರಾಜಕೀಯಕ್ಕೆ ನಿದರ್ಶನವಾಯಿತು.

News By: ಅಕ್ಷಯ್ ತೀರ್ಥಹಳ್ಳಿ

Admin

Leave a Reply

Your email address will not be published. Required fields are marked *

error: Content is protected !!