ಶಿಕಾರಿಪುರ : ಕನ್ನಡ ನಾಡಿಗೆ ಶಿಕಾರಿಪುರ ತಾಲೂಕಿನ ಕೊಡುಗೆ ಅಪಾರ ಈ ಪುಣ್ಯಭೂಮಿಯಲ್ಲಿ ಜನ್ಮತಾಳಿದ ನಾವೇ ಪುಣ್ಯವಂತರು: ಸಂಸದ ಬಿ.ವೈ ರಾಘವೇಂದ್ರ..!
![ಶಿಕಾರಿಪುರ : ಕನ್ನಡ ನಾಡಿಗೆ ಶಿಕಾರಿಪುರ ತಾಲೂಕಿನ ಕೊಡುಗೆ ಅಪಾರ ಈ ಪುಣ್ಯಭೂಮಿಯಲ್ಲಿ ಜನ್ಮತಾಳಿದ ನಾವೇ ಪುಣ್ಯವಂತರು: ಸಂಸದ ಬಿ.ವೈ ರಾಘವೇಂದ್ರ..!](https://shikarinews.com/wp-content/uploads/2021/11/IMG_20211101_094254.jpg)
ಶಿಕಾರಿಪುರ :ಕನ್ನಡ ನಾಡಿಗೆ ಶಿಕಾರಿಪುರ ತಾಲೂಕಿನ ಕೊಡುಗೆ ಅಪಾರವಾಗಿದೆ ಕನ್ನಡದ ಮೊದಲ ದೊರೆ ಮಯೂರವರ್ಮ ಕದಂಬರ ರಾಜ್ಯ ಅಕ್ಕಮಹಾದೇವಿ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಜಿ.ಎಸ್ ಶಿವರುದ್ರಪ್ಪ ನಮ್ಮ ತಾಲೂಕಿನ ಹೆಮ್ಮೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
![](https://shikarinews.com/wp-content/uploads/2021/11/IMG_20211101_092903-1024x576.jpg)
ಶಿಕಾರಿಪುರ ಪಟ್ಟಣದ ನರಸಪ್ಪ ಬಯಲು ರಂಗಮಂದಿರದಲ್ಲಿ ಕನ್ನಡ ಯುವಕ ಸಂಘ ಅಯೋಜಿಸಿದ ಕನ್ನಡ ರಾಜೋತ್ಸವ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕಾರಿಪುರ ತಾಲೂಕು ಇತಿಹಾಸ ಇರುವ ನಾಡು ಕನ್ನಡ ರಾಜೋತ್ಸವ ಆಚರಿತ್ತಿದ್ದೇವೆ ಕದಂಬರ ಇತಿಹಾಸ ಮಯೂರ ವರ್ಮನಿಂದ ಕನ್ನಡ ಶಾಸನ ರಾಷ್ಟ ಕವಿಗಳು ಜನ್ಮನಿಡಿದ ಊರು ಇಂತಹ ಭೂಮಿಯಲ್ಲಿ ನಾವೆಲ್ಲರೂ ಜನ್ಮ ತಾಳಿರುವುದು ಪುಣ್ಯವಂತರು ಎಂದರು.
![](https://shikarinews.com/wp-content/uploads/2021/11/IMG_20211101_092447-1024x576.jpg)
ಕೇಂದ್ರದಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದು ಕನ್ನಡಕ್ಕೆ ಶಕ್ತಿಯನ್ನು ತುಂಬವ ಕೆಲಸ ನಾವೆಲ್ಲ ಮಾಡಬೇಕಾಗಿದೆ ಅದ್ದೂರಿಯಾಗಿ ಇನ್ನೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸೊಣ ಎಂದರು.
![](https://shikarinews.com/wp-content/uploads/2021/10/IMG-20211029-WA0021.jpg)
ಈ ಸಂದರ್ಭದಲ್ಲಿ ಕನ್ನಡ ಯುವಕ ಸಂಘದ ಅಧ್ಯಕ್ಷರಾದ ಸಂಜುಸ್ವಾಮಿ, ಪುರಸಭಾ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಭಂಡಾರಿ ಮಾಲತೇಶ್,ತಹಶೀಲ್ದಾರ್ ಕವಿರಾಜ್, ಬಿ.ಇಓ,ಶಶಿಧರ್ ಬಡಗಿ ಪಾಲಕ್ಷಪ್ಪ, ನಗರದ ಮಾಲತೇಶ್, ಸತೀತ್, ಗೀರಿಶ್, ಗುಡ್ಡಳ್ಳಿ ಸಂತೋಷ್ ಗಿಡ್ಡೇಶ್, ರಾಜು, ಮಾರುತಿ,ಸನಮಂಜಪ್ಪ, ರುದ್ರಮುನಿ, ಶಿವನಗೌಡ ,ದೇವೇಂದ್ರಪ್ಪ, ರೇಣುಕಸ್ವಾಮಿ, ರೂಪ ಮಂಜುನಾಥ, ಸುನಂದ ಮಂಜುನಾಥ, ವಿರೇಶ್,ಇದ್ದರು.
![](https://shikarinews.com/wp-content/uploads/2021/10/IMG_20210825_185201_020.jpg)
News by: Raghu Shikari-7411515737