ಶಿವಮೊಗ್ಗದ ಕೃಷಿಕಾಲೇಜಿನ ಪ್ರೊ.ಗಂಗಾಪ್ರಸಾದ್ ಶವ ಚಿಕ್ಕಬಾಸೂರು ತಾಂಡಾದಲ್ಲಿ ಬಳಿ ಪತ್ತೆ…!

ಶಿವಮೊಗ್ಗದ ಕೃಷಿಕಾಲೇಜಿನ ಪ್ರೊ.ಗಂಗಾಪ್ರಸಾದ್ ಶವ ಚಿಕ್ಕಬಾಸೂರು ತಾಂಡಾದಲ್ಲಿ ಬಳಿ ಪತ್ತೆ…!

ಶಿವಮೊಗ್ಗ: ಶಿವಮೊಗ್ಗ ಕೃಷಿ ಕಾಲೇಜಿನ ಜಿ.ಪಿ.ಬಿ. ವಿಭಾಗದ ಮುಖ್ಯಸ್ಥರಾದ ಪ್ರೊ. ಗಂಗಾಪ್ರಸಾದ್ ಅವರ ಮೃತದೇಹ ಹೊನ್ನಾಳಿ ತಾ. ಸಾಸ್ವಹಳ್ಳಿ ಸಮೀಪದ ಚಿಕ್ಕಬಾಸೂರು ತಾಂಡದ (ವಿಜಯಪುರ)ಕೆರೆ ಸಮೀಪ ಮಂಗಳವಾರ ಪತ್ತೆಯಾಗಿದೆ.

ಶಿವಮೊಗ್ಗ ಬಸವೇಶ್ವರ ನಗರದ ನಿವಾಸಿಯಾಗಿದ ಅವರು ಅಪಾರ ವಿದ್ಯಾರ್ಥಿಗಳ ಆಪ್ತ ಗುರುಗಳೂ ಆಗಿದ್ದರು ಗಂಗಾಪ್ರಸಾದ್ (59) ಅವರ ಮೃತದೇಹ ಚಿಕ್ಕಬಾಸೂರು ತಾಂಡದ ಬಳಿ ಪತ್ತೆಯಾಗಿದ್ದು ಅನುಮಾನಕ್ಕೆ ಕಾರಣವಾಗಿದ್ದು ನೂರಾರು ಪ್ರಶ್ನೆಗಳು ಕಾಡುತ್ತಿವೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಚಿಕ್ಕಬಾಸೂರು ತಾಂಡ( ವಿಜಯಪುರ) ಬಳಿ ಪತ್ತೆಯಾಗಿರುವ ಇವರ ಶವವನ್ನು ಕಾಲೇಜಿನ ವಿದ್ಯಾರ್ಥಿಯೋರ್ವ ಪತ್ತೆ ಹಚ್ಚಿದ್ದರೆನ್ನಲಾಗಿದೆ.

ಅವರನ್ನು ಶಿವಮೊಗ್ಗ ಅಗ್ರಿಕಲ್ಚರಲ್ ಕಾಲೇಜಿನ ಪ್ರೊ.ಗಂಗಾಪ್ರಸಾದ್ ಶವ ಎಂದು ಗುರುತಿಸಲಾಗಿದೆ ಸಾವಿನ ಕಾರಣ ತಿಳಿದುಬರಬೇಕಿದೆ.

ಇಲ್ಲಿ ಕೊಲೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ಇವರು ಮೂಲತಹ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ದೊಗ್ಗನಾಳು ಗ್ರಾಮದ ನಿವಾಸಿ ಎನ್ನಲಾಗಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!