ಶಿಕಾರಿಪುರ : ಮಕ್ಕಳಿಗೆ ಸಾಹಿತ್ಯ ಗಳನ್ನು ಓದುವುದನ್ನು ಕಲಿಸಿ ಆಗ‌ ಮಾತ್ರ ಸಾಹಿತ್ಯ ಕ್ಷೇತ್ರ ಉಳಿಯಲು ಸಾಧ್ಯ: ಡಿ. ಮಂಜುನಾಥ…!

ಶಿಕಾರಿಪುರ : ಮಕ್ಕಳಿಗೆ ಸಾಹಿತ್ಯ ಗಳನ್ನು ಓದುವುದನ್ನು ಕಲಿಸಿ ಆಗ‌ ಮಾತ್ರ ಸಾಹಿತ್ಯ ಕ್ಷೇತ್ರ ಉಳಿಯಲು ಸಾಧ್ಯ: ಡಿ. ಮಂಜುನಾಥ…!

ಶಿಕಾರಿಪುರ: ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ
ಕರ್ನಾಟಕ ಜಾನಪದ ಪರಿಷತ್ತು ಪೂಜಿ ವಿದ್ಯಾಸಂಸ್ಥೆ ವತಿಯಿಂದ ದಸರಾ ಕವಿಗೋಷ್ಠಿಯ ಗಾಯನ ಗೋಷ್ಠಿಯನ್ನು ಗುರುಭವನದಲ್ಲಿ ನಡೆಸಲಾಯಿತು.

ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿ ಮಂಜುನಾಥ ಮಾತನಾಡಿ ಶಿಕಾರಿಪುರ ತಾಲೂಕಿನಲ್ಲಿ ಸಾಹಿತ್ಯ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ವೇದಿಕೆ ಇದೆ‌ ಸಾಹಿತ್ಯದ ನಮ್ಮ ಅನುಭವವನ್ನು ಹಂಚಿಕೊಳ್ಳಲು ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ ನಿಮ್ಮ ಮಕ್ಕಳಿಗೆ ಪಾಠ್ಯಪುಸ್ತಕಗಳ ಜೊತೆ ಸಾಹಿತ್ಯ ಪುಸ್ತಕ ಓದುವುದನ್ನು ಕಲಿಸಿ ಆಗ ಮಾತ್ರ ಸಾಹಿತ್ಯ ಉಳಿಸಲು ಸಾಧ್ಯ ಎಂದರು.

ಸಾಹಿತಿ ಸಾಮಾಜಿಕ ಕಾಳಜಿ ಇಟ್ಟುಕೊಂಡು ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಬರೆಯುವ ಬರಹಗಾರರು ನೊಡಿಕೊಳ್ಳಬೇಕು.

ಸೂಕ್ಷ್ಮ ದೃಷ್ಟಿಯಿಂದ ನೊಡುವುದು ಕೊಳಕು ಮನಸ್ಸಿನ ಆಲೋಚನೆಗಳನ್ನು ತೊಳದು ಹಾಕಬೇಕು ಸಮಾನತೆಯನ್ನು ಸಾರುವಂತಿರಬೇಕು.

ಸಾಹಿತ್ಯ ಕಲಿಯುವುದು ಸುಲಭದ ಕೆಲಸವಲ್ಲ ಕಾವ್ಯ ಸೃಷ್ಟಿ ಕೂಡ ಅತ್ಯಂತ ಕಠಿಣವಾಗದ್ದು ಸಾಹಿತ್ಯ ಕ್ಷೇತ್ರದಲ್ಲಿ ತಿಳಿದುಕೊಳ್ಳುವ ಹಸಿವು ಇರಬೇಕು ನಮ್ಮ ಸುತ್ತಮುತ್ತಲಿನ ಪರಿಸರ, ವ್ಯವಸ್ಥೆಗಳ ಕುರಿತು ಬರೆಯುವ‌ ಜಾಣ್ಮೆ ಚಾಕಚಕ್ಯತೆ ಬರಹಗಾರನಿಗೆ ಇರಬೇಕು ಎಂದರು.

ಈ ಸಂದರ್ಭದಲ್ಲಿ ಬಿ.ಇಓ ಶಶಿಧರ್, ಜಾನಪದ ವೇದಿಕೆ ಅಧ್ಯಕ್ಷರಾದ ಕೆ.ಎಸ್ ಹುಚ್ಚರಾಯಪ್ಪ ,ಬಾಪೂಜಿ ವಿದ್ಯಾಸಂಸ್ಥೆಯ ಪಾಪಯ್ಯ, ಮಮತಾ ಸಾಲಿ, ಪ್ರಕಾಶ್, ,ಜಗದೀಶ್,ಸತ್ಯನಾರಾಯಣ, ಧರ್ಮೋಜಿ, ನಾಗರಾಜ್,ಹಾಲಪ್ಪ, ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!