ಶಿಕಾರಿಪುರ: ಜಾತಿ ನಿಂದನೆ ಅವಹೇಳನಕಾರಿ ಪೋಸ್ಟ್ ಮಾಡಿದ ಶಿಕ್ಷಕ ರಾಮಚಂದ್ರ ನಾಯ್ಕ್ ವಿರುದ್ಧ ಕ್ರಮಕ್ಕೆ ದಲಿತ ಸಂಘಟನೆ ಆಗ್ರಹ…!
![ಶಿಕಾರಿಪುರ: ಜಾತಿ ನಿಂದನೆ ಅವಹೇಳನಕಾರಿ ಪೋಸ್ಟ್ ಮಾಡಿದ ಶಿಕ್ಷಕ ರಾಮಚಂದ್ರ ನಾಯ್ಕ್ ವಿರುದ್ಧ ಕ್ರಮಕ್ಕೆ ದಲಿತ ಸಂಘಟನೆ ಆಗ್ರಹ…!](https://shikarinews.com/wp-content/uploads/2021/09/IMG-20210913-WA0068.jpg)
ಶಿಕಾರಿಪುರ : ಶಿಕಾರಿಪುರ ಪಟ್ಟಣದ ತಾಲೂಕು ಕಚೇರಿ ಮತ್ತು ಶಿಕ್ಷಣಾಧಿಜಾರಿಗಳ ಕಛೇರಿ ಎದರು ದಲಿತ ಸಂಘರ್ಷ ಸಮಿತಿ ವತಿಯಿಂದ ದಲಿತರ ಜಾತಿಯ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ ಶಿಕ್ಷಕ ರಾಮಚಂದ್ರ ನಾಯ್ಕ್ ವಿರುದ್ದ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
![](https://shikarinews.com/wp-content/uploads/2021/09/IMG_20210913_131347-1024x576.jpg)
ಜಾತಿನಿಂದನೆ ಜಾತಿಗಳ ಪ್ರಚೋದನಾತ್ಮಕ ವಾಟ್ಸಪ್ ಹರಿಬಿಡುತ್ತಿರುವ ಶಿಕಾರಿಪುರ ತಾಲೂಕ್ ಹಳೆಯ ಮುಗುಳುಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ರಾಮಚಂದ್ರ ನಾಯ್ಕ್ ರನ್ನು ಕೆಲಸದಿಂದ ವಜಾಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
![](https://shikarinews.com/wp-content/uploads/2021/08/IMG_20210825_185201_020.jpg)
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರ ಜಗದೀಶ್, ಮಾದಿಗ ಸಮಾಜದ ಪ್ರಕಾಶ್, ಬಸವರಾಜ್, ನಾಗರಾಜ್, ಚಂದ್ರಪ್ಪ, ಸಂತೋಷ್, ರಮೇಶ್, ರಾಜಪ್ಪ, ಚಂದ್ರಕಲಾ, ರೇಣುಕಾ ಉಪಸ್ಥಿತರಿದ್ದರು.
![](https://shikarinews.com/wp-content/uploads/2021/08/918197366777_status_7d5ff211dac742b68023271a8646fe82-1024x585.jpg)
News by: Rghu shikari-7411515737