ಶಿಕಾರಿಪುರ:ಬಸವೇಶ್ವರ, ವಿಠಲ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಸಂಸದ ಬಿ.ವೈ.ಆರ್ ಗುದ್ದಲಿ ಪೂಜೆ..!
![ಶಿಕಾರಿಪುರ:ಬಸವೇಶ್ವರ, ವಿಠಲ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಸಂಸದ ಬಿ.ವೈ.ಆರ್ ಗುದ್ದಲಿ ಪೂಜೆ..!](https://shikarinews.com/wp-content/uploads/2021/09/IMG_20210903_105440.jpg)
ಶಿಕಾಪುರ ಪಟ್ಟಣದಲ್ಲಿ ನೂತನವಾಗಿ ನಿರ್ಮಾಸಲಾಗುತ್ತಿರುವ ಶ್ರೀ ಬಸವೇಶ್ವರ ದೇವಾಲಯದ ಸಮುದಾಯ ಭವನ ಹಾಗೂ ಪಾಂಡುರಂಗ ವಿಠಲ ದೇವಾಲಯ ಸಮುದಾಯ ಭವನಗಳಿಗೆ ಸಂಸದ ಬಿ..ವೈ ರಾಘವೇಂದ್ರ ಗುದ್ದಲಿ ಪೂಜೆ ಸಲ್ಲಿಸಿದರು.
![](https://shikarinews.com/wp-content/uploads/2021/09/IMG_20210903_105154-1024x576.jpg)
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾಜಿ ಸಿಎಂ ಬಿ.ಎಸ್ ವೈ ಅವರ ಆರ್ಶಿವಾದದಿಂದ ತಾಲೂಕಿನ ಸಮಗ್ರ ಅಭಿವೃದ್ಧಿ ಎಲ್ಲಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಹಣವನ್ನು ಮಂಜೂರು ಮಾಡಿಲಾಗಿದೆ.
![](https://shikarinews.com/wp-content/uploads/2021/09/IMG_20210903_104343-1024x576.jpg)
ನಾಮದೇವ ಸಿಂಪಿ ಸಮಾಜ ಬಿ.ಎಸ್ ವೈ ಅವರಿಗೆ ರಾಜಕೀಯ ಶಕ್ತಿಯನ್ನು ನೀಡಿದೆ ಅವರ ಋಣ ತೀರಿಸಲು ಅಳಿಲು ಸೇವೆ ನಾವು ಮಾಡಿದ್ದೇವೆ.
ಸರ್ಕಾರದ ಜೊತೆಗೆ ಸಾರ್ವಜನಿಕವಾಗಿ ದೇಣಿಗೆ ಪಡೆದು ಇನ್ನೂ ಅದ್ಬುತವಾಗಿ ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂದರು
![](https://shikarinews.com/wp-content/uploads/2021/09/IMG_20210903_104222-1024x768.jpg)
ದೊಡ್ಡ ಪೇಟ್ಟೆಯ ಬಸವೇಶ್ವರ ದೇವಸ್ಥಾನ ಸಮುದಾಯ ಭವನ ವಿಠಲ್ ದೇವಸ್ಥಾನದ ಸಮುದಾಯ ಭವನ ಸೇರಿ ಒಂದು ಕೋಟಿ ಅನುದಾನ ನೀಡಲಾಗಿದೆ.
![](https://shikarinews.com/wp-content/uploads/2021/09/IMG_20210825_185201_020.jpg)
ಸಮುದಾಯ ಭವನಗಳು ಸದ್ಬಳಕೆಯಾಗಬೇಕಾಗಿದೆ ಸಮಾಜದಲ್ಲಿ ಇರುವ ಬಡವರಿಗೆ ಮದುವೆ ಇತರೆ ಕಾರ್ಯಕ್ರಮಗಳಿಗೆ ಅನುಕೂಲವಾಗಿಲಿ ಎಂದರು.
![](https://shikarinews.com/wp-content/uploads/2021/08/918197366777_status_7d5ff211dac742b68023271a8646fe82-1024x585.jpg)
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಲಕ್ಷ್ಮಿಮಹಾದೇವಪ್ಪ, ಎಂಐಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ನಾರಾಯಣಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಪುರಸಬಾ ಸ್ಥಾಯಿ ಸಮಿತಿ ಅಧ್ಯಕ್ಷ ರೇಣುಕಸ್ವಾಮಿ,ವೀರಶೈವ ಸಮಾಜದ ಮುಖಂಡರು ಮತ್ತಿತರ ಇದ್ದರು.
News by: Raghu Shikari-7411515737