ಶಿಕಾರಿಪುರ : ಕಪ್ಪನಹಳ್ಳಿ ಗ್ರಾಮದಲ್ಲಿ ಋಗ್ವೇದ ಗೋಶಾಲೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ..!.
![ಶಿಕಾರಿಪುರ : ಕಪ್ಪನಹಳ್ಳಿ ಗ್ರಾಮದಲ್ಲಿ ಋಗ್ವೇದ ಗೋಶಾಲೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ..!.](https://shikarinews.com/wp-content/uploads/2021/08/IMG_20210827_103532-scaled.jpg)
ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಗ್ರಾಮದಲ್ಲಿ ಋಗ್ವೇದ ಗೋಶಾಲಾ ಟ್ರಸ್ಟ್ ವತಿಯಿಂದ ಶುಕ್ರವಾರ ನೂತನ ಗೋಶಾಲೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನಡೆಸಲಾಯಿತು.
ಈ ಸಂದರ್ಭ ಟ್ರಸ್ಟ್ ಸದಸ್ಯರ ಕುಟುಂಬದ ಸದಸ್ಯರು ಕುಟುಂಬ ಸಮೇತರಾಗಿ ಆಗಮಿಸಿ ಭೂಮಿ ಪೂಜೆಯನ್ನು ಸಲ್ಲಿಸಿದರು.
![](https://shikarinews.com/wp-content/uploads/2021/08/IMG_20210827_104154-1024x576.jpg)
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ರಾಕೇಶ್ ಮಾತನಾಡಿ
ಉದ್ದೇಶಿತ ಗೋಶಾಲೆ ನಿರ್ಮಾಣಕ್ಕೆ ಅಡಿಪಾಯ ಕಾರ್ಯ ಆರಂಭವಾಗಿದೆ ನೂರಾರು ಗೋವುಗಳ ಸಂರಕ್ಷಣಾ ಮಾಡುವ ಉದ್ದೇಶವನ್ನು ನಾವು ಹೊಂದಿದ್ದು ಈಗಾಗಲೇ ಅಳಿವಿನ ಅಂಚಿನಲ್ಲಿ ಇರುವ ದೇಶಿಯ ಗೋ ತಳಿಗಳನ್ನು ಉಳಿಸುವುದು ನಮ್ಮ ಧ್ಯೇಯವಾಗಿದೆ.
![](https://shikarinews.com/wp-content/uploads/2021/08/IMG_20210827_104631-1024x768.jpg)
ಗೋಶಾಲೆ ನಿರ್ಮಾಣಕ್ಕೆ ಸಮಾಜದ ಎಲ್ಲಾ ವರ್ಗದ ಜನತೆಯ ಸಹಕಾರ ಅಗತ್ಯವಿದೆ ಮುಂದಿನ ದಿನಗಳಲ್ಲಿ ನೂರಾರು ಗೋವುಗಳ ಸಾಕಲು ಮೇವು, ನಿರ್ವಹಣೆ ವೆಚ್ಚ ಬರಲಿದ್ದು ಗೋ ಪ್ರೇಮಿಗಳು ಸಹಕಾರ ಅಗತ್ಯವಿದೆ ಎಂದರು.
![](https://shikarinews.com/wp-content/uploads/2021/08/918197366777_status_7d5ff211dac742b68023271a8646fe82-1024x585.jpg)
ಈ ಸಂದರ್ಭದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಪವನ್ ಕಲಾಲ್, ಖಜಾಂಚಿ ನಾಗೇಂದ್ರ, ವಸಂತ್ ಸೊಲಂಕಿ, ಕಪ್ಪನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಚರಣಕುಮಾರ್, ನಂದೀಶ್ , ಸಂದೇಶ್,ಪ್ರವೀಣ್ ಹದಡಿ,ಸಿದ್ದೇಶ್ ಇದ್ದರು.
![](https://shikarinews.com/wp-content/uploads/2021/08/IMG_20210825_185201_020.jpg)
News By: Raghu Shikari-7411515737