ಶಿಕಾರಿಪುರ ಮಳೆಯ ನಡುವೆಯೂ ಛತ್ರಿ ಹಿಡಿದು ರೈತರ ಪ್ರತಿಭಟನೆ…!
ಶಿಕಾರಿಪುರ ಪಟ್ಟಣದಲ್ಲಿ ಗುರುವಾರ ಬಸವಾಪುರ ಬೇಚಾರ ರೈತರ ಹಿತರಕ್ಷಣಾ ವೇದಿಕೆಯ ವತಿಯಿಂದ ಅರಣ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆಯನ್ನು ನಡೆಸಲಾಯಿತು.
ಮುಂಜಾನೆಯಿಂದಲ್ಲೂ ಸುರಿಯುತ್ತಿರುವ ಬಾರಿ ಮಳೆ ಸುರಿಯುತ್ತಿದ್ದು ಮಳೆಯ ನಡೆವೆಯೂ ರೈತರು ಪ್ರತಿಭಟನಾ ಮೇರವಣಿಗೆಯನ್ನು ನಡೆಸಿದರು.
ಶಿಕಾರಿಪುರ ಪಟ್ಟಣದ ಅರಣ್ಯ ಅಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆಯನ್ನು ನಡೆಸಿ ನಂತರ ದೊಡ್ಡಪೇಟ್ಟೆ ಮಾರ್ಗದ ಮೂಲಕ ತಾಲೂಕ್ ಕಛೇರಿಗೆ ಆಗಮಿಸಿ ತಹಶಿಲ್ದಾರ್ ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಮೆರವಣಿಗೆಗೆ ಜಿಲ್ಲಾ ಕಾಂಗ್ರೆಸ್ ಮುಖಂಡ ತಿನಾ ಶ್ರೀನಿವಾಸ್ ಜೆಡಿಎಸ್ ಹೆಚ್.ಟಿ ಬಳೆಗಾರ್ , ರೈತ ಮುಖಂಡ ಅಮೃತ್ ದಾಸ್, ಹೋರಾಟ ಸಮಿತಿಯ ಮಧು ಅನವಟ್ಟಿ ಉದಯ್ ಭೋಗಿ, ಶ್ಯಾಮ್ , ಹಾಗೂ ರೈತರು ಇದ್ದರು.
News by: Raghu Shikari-7411515737