ಶಿಕಾರಿಪುರ: ರೈತರ ಹಿತ್ತ ದೃಷ್ಟಿಯಿಂದ ಬಿತ್ತನೆ ಬೀಜ ರಸಗೊಬ್ಬರ ಮಾರಟ‌ ಮಳಿಗೆ ತೆರೆಯಲು ಅವಕಾಶ..!

ಶಿಕಾರಿಪುರ: ರೈತರ ಹಿತ್ತ ದೃಷ್ಟಿಯಿಂದ  ಬಿತ್ತನೆ ಬೀಜ ರಸಗೊಬ್ಬರ ಮಾರಟ‌ ಮಳಿಗೆ ತೆರೆಯಲು ಅವಕಾಶ..!

ಶಿಕಾರಿಪುರ ತಾಲೂಕಿನ ಮಂಗಾರು ಮಳೆ ಆರಂಭವಾಗಿದ್ದು ರೈತರು ಕೃಷಿ ಚಟುವಟಿಕೆಗಳನ್ನು‌ ಆರಂಭಿಸಿದ್ದಾರೆ ಈ ಸಮಯದಲ್ಲಿ ರೈತರಿಗೆ ಅಗತ್ಯವಾಗಿ ಬೇಕಾಗಿರುವ ಬಿತ್ತನೆ ಬೀಜ ರಸಗೊಬ್ಬರ ಕೃಷಿ ಪರಿಕರ ಮಳಿಗೆ ತರೆಯಲು ತಹಶೀಲ್ದಾರ್ ಎಂ.ಪಿ ಕವಿರಾಜ್ ಶನಿವಾರ ಆದೇಶ ಹೊರಡಿಸಿದ್ದಾರೆ.

ತಾಲೂಕಿನಲ್ಲಿ ಜೂ.8 ವರೆಗೂ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗಿದ್ದು ರೈತರಿಗೆ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಲು ಕೃಷಿ ಇಲಾಖೆ ಮನವಿ‌ ಮೇರೆ ತಾಲೂಕ್ ಟಾಸ್ಕ್ ಫೋರ್ಸ್ ಸಭೆ ನೀಡಿ ಗೊಬ್ಬರ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ‌.

ತಾಲೂಕಿನ‌ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳಗ್ಗೆ 6-ರಿಂದ 10 ಗಂಟೆಯವರೆಗೆ ಮತ್ತು ಶಿಕಾರಿಪುರ ಶಿರಾಳಕೊಪ್ಪ ಟೌನ್ ನಲ್ಲಿ ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಮಳಿಗಳನ್ನು ತೆರೆಯಲು ಅನುಮತಿ ನೀಡಿದ್ದು ರೈತರು ಅಂಗಡಿ‌ ಮಾಲೀಕರು ಕಡ್ಡಾಯವಾಗಿ ಕೋವಿಡ್ ನಿಯಮ‌ ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!