ಶಿಕಾರಿಪುರ: ರೈತರ ಹಿತ್ತ ದೃಷ್ಟಿಯಿಂದ ಬಿತ್ತನೆ ಬೀಜ ರಸಗೊಬ್ಬರ ಮಾರಟ ಮಳಿಗೆ ತೆರೆಯಲು ಅವಕಾಶ..!
![ಶಿಕಾರಿಪುರ: ರೈತರ ಹಿತ್ತ ದೃಷ್ಟಿಯಿಂದ ಬಿತ್ತನೆ ಬೀಜ ರಸಗೊಬ್ಬರ ಮಾರಟ ಮಳಿಗೆ ತೆರೆಯಲು ಅವಕಾಶ..!](https://shikarinews.com/wp-content/uploads/2021/06/IMG_20210606_090335-scaled.jpg)
ಶಿಕಾರಿಪುರ ತಾಲೂಕಿನ ಮಂಗಾರು ಮಳೆ ಆರಂಭವಾಗಿದ್ದು ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ ಈ ಸಮಯದಲ್ಲಿ ರೈತರಿಗೆ ಅಗತ್ಯವಾಗಿ ಬೇಕಾಗಿರುವ ಬಿತ್ತನೆ ಬೀಜ ರಸಗೊಬ್ಬರ ಕೃಷಿ ಪರಿಕರ ಮಳಿಗೆ ತರೆಯಲು ತಹಶೀಲ್ದಾರ್ ಎಂ.ಪಿ ಕವಿರಾಜ್ ಶನಿವಾರ ಆದೇಶ ಹೊರಡಿಸಿದ್ದಾರೆ.
![](https://shikarinews.com/wp-content/uploads/2021/06/IMG-20210606-WA0011-461x1024.jpg)
ತಾಲೂಕಿನಲ್ಲಿ ಜೂ.8 ವರೆಗೂ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗಿದ್ದು ರೈತರಿಗೆ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಲು ಕೃಷಿ ಇಲಾಖೆ ಮನವಿ ಮೇರೆ ತಾಲೂಕ್ ಟಾಸ್ಕ್ ಫೋರ್ಸ್ ಸಭೆ ನೀಡಿ ಗೊಬ್ಬರ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ.
![](https://shikarinews.com/wp-content/uploads/2021/06/FB_IMG_1622948201265.jpg)
ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳಗ್ಗೆ 6-ರಿಂದ 10 ಗಂಟೆಯವರೆಗೆ ಮತ್ತು ಶಿಕಾರಿಪುರ ಶಿರಾಳಕೊಪ್ಪ ಟೌನ್ ನಲ್ಲಿ ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಮಳಿಗಳನ್ನು ತೆರೆಯಲು ಅನುಮತಿ ನೀಡಿದ್ದು ರೈತರು ಅಂಗಡಿ ಮಾಲೀಕರು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.
News by: Raghu Shikari-7411515737