ಶಿಕಾರಿಪುರ : ರೈತರಿಗೆ ಬಿತ್ತನೆ ಬೀಜ ರಸಗೊಬ್ಬರ ಖರೀದಿಗೆ ಅವಕಾಶ ನೀಡಬೇಕು: ಯುವ ಕಾಂಗ್ರೆಸ್ ಆಗ್ರಹ..!
![ಶಿಕಾರಿಪುರ : ರೈತರಿಗೆ ಬಿತ್ತನೆ ಬೀಜ ರಸಗೊಬ್ಬರ ಖರೀದಿಗೆ ಅವಕಾಶ ನೀಡಬೇಕು: ಯುವ ಕಾಂಗ್ರೆಸ್ ಆಗ್ರಹ..!](https://shikarinews.com/wp-content/uploads/2021/06/IMG-20210603-WA0027.jpg)
ಶಿಕಾರಿಪುರ ತಾಲೂಕಿನಲ್ಲಿ ರೈತರಿಗೆ ಮಂಗಾರು ಆಗಮಿಸುತ್ತಿರುವುದರಿಂದ ಬಿತ್ತನೆ ಬೀಜ ರಸಗೊಬ್ಬರ ಔಷಧ ಕೊಡಿಸಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಆಗ್ರಹಿಸಿ ತಹಶಿಲ್ದಾರ್ ಗೆ ಮನವಿ ನೀಡಿದರು.
![](https://shikarinews.com/wp-content/uploads/2021/06/IMG-20210603-WA0028-1024x689.jpg)
ಶಿಕಾರಿಪುರ ಪಟ್ಟಣದಲ್ಲಿ ಗುರುವಾರ ತಾಲೂಕ್ ಕಛೇರಿ ಎದರು ಯುವ ಕಾಂಗ್ರೆಸ್ ವತಿಯಿಂದ ತಾಲೂಕಿನಲ್ಲಿ ಲಾಕ್ ಡೌನ್ ಕಾರಣದಿಂದ ರೈತರಿಗೆ ವ್ಯಾವಸಾಯಿಕ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತಿದೆ ಬಿತ್ತನೆಬೀಜ ರಸಗೊಬ್ಬರ ಒದಗಿಸಿ ಅನುಕೂಲ ಮಾಡಿಕೊಡಬೇಕು ಎಂದು ತಾಲೂಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕನಾಯ್ಕ್ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ , ಯುವ ಕಾಂಗ್ರೆಸ್ ಮುಖಂಡ ಭಂಡಾರಿ ಮಾತಲೇಶ್ , ಎನ್ ಎಸ್ ಯುಐ ಅಧ್ಯಕ್ಷ ಶಿವು ಹುಲ್ಮಾರ್, ಶಿವಶಂಕರ್ ಇದ್ದರು.
News by: Raghu Shikari-7411515737