ಬಾಯಿಹುಣ್ಣು ಮೌತ್ ಅಲ್ಸರ್…!
![ಬಾಯಿಹುಣ್ಣು ಮೌತ್ ಅಲ್ಸರ್…!](https://shikarinews.com/wp-content/uploads/2021/04/images-8.jpeg)
ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
ಸ್ವಾಸ್ಥ್ಯ ಸರ್ವರದ್ದೂ ಆಗಲಿ
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
✍️: ಇಂದಿನ ವಿಷಯ:
ಬಾಯಿಹುಣ್ಣು
ಮೌತ್ ಅಲ್ಸರ್
ಬಾಯಿ ಕರಗುವುದು, ಬಾಯಿ ಒಡೆಯುವುದು, ಬಾಯಿಹುಣ್ಣು ಎಂದು ಮುಂತಾಗಿ ಕರೆಯುವ ತೊಂದರೆಯನ್ನು ಅನುಭವಿಸುವವರಿಗೇ ಗೊತ್ತು ಅದರ ತೀವ್ರತೆ.
ಆಹಾರ ಅಗಿಯಲು ಆಗದು, ಖಾರ ಮುಟ್ಟಿಸಲೂ ಆಗದು, ಮಾತನಾಡಲು ತೊದಲುವ, ಸದಾ ಉರಿ ನೋವುಗಳಿಂದ ಕಾಡುವ ಬಾಯಿಹುಣ್ಣನ್ನು ಸಂಸ್ಕೃತದಲ್ಲಿ ಆಯುರ್ ವೈದ್ಯಕೀಯ ಭಾಷೆಯಲ್ಲಿ ಆಸ್ಯಪಾಕ ಎನ್ನುತ್ತಾರೆ.
ಆಸ್ಯ ಎಂದರೆ ಬಾಯಿ, ಪಾಕ ಎಂದರೆ ಬೆಂದಿರುವುದು, ಕರಗುವುದು ಎಂದರ್ಥ
ಕಾರಣಗಳೇನು?
ಹೆಚ್ಚಿನ ಜನರಿಗೆ ಅತ್ಯಂತ ಹತ್ತಿರದ ಕಾರಣ ಗೊತ್ತಿಲ್ಲ, ಅದುವೇ ನಮ್ಮ ಟೂತ್ಪೇಸ್ಟ್!!!
ಅದರಲ್ಲಿರುವ SLS ಬಾಯಿ ಹುಣ್ಣಾಗುವಂತೆ ಮತ್ತು ಹುಣ್ಣಾದರೆ ಬೇಗ ವಾಸಿಯಾಗದಂತೆ ಮಾಡುತ್ತದೆ.
![](https://shikarinews.com/wp-content/uploads/2021/04/images-7.jpeg)
ಉಳಿದಂತೆ ಬಿ ವಿಟಮಿನ್ ಗಳ ಕೊರತೆ, ಕರುಳಿನ ಊತ, ಆಮ್ಲಪಿತ್ತ ಮುಂತಾದವು ಕಾರಣ.
ಶಾಶ್ವತ ಪರಿಹಾರ ಏಕೆ ಸಿಗುತ್ತಿಲ್ಲ?
ಕೇವಲ ಬಿ ಕಾಂಪ್ಲೆಕ್ಸ್ ಮಾತ್ರೆಗಳು ಪೂರ್ಣ ಪರಿಹಾರ ಮಾಡುವುದಿಲ್ಲ. ವಾಸ್ತವದಲ್ಲಿ ಬಿ ವಿಟಮಿನ್ ತುಂಬುವುದು ಹೊರಗಿನ ಮಾತ್ರೆ, ಆಹಾರಗಳಿಂದ ಅಲ್ಲ. ಕರುಳಿನಲ್ಲಿ ಆಮ್ಲತೆ ಹೆಚ್ಚಾದರೆ ಬಿ ವಿಟಮಿನ್ ಕೊರತೆ ಪದೇ ಪದೇ ಅಥವಾ ಶಾಶ್ವತವಾಗಿ ಕಾಡುತ್ತದೆ.
![](https://shikarinews.com/wp-content/uploads/2021/04/images-5.jpeg)
ಮತ್ತು
ನಿತ್ಯ ಬಳಸುವ ಎಲ್ಲಾ ವಿಧದ ಟೂತ್ಪೇಸ್ಟ್ ಗಳಲ್ಲೂ SLS ಅಥವಾ ಅದಕ್ಕೆ ಸಮಸಮವಾದ ಡಿಟರ್ಜಂಟ್ ಗಳು ಇರುತ್ತವೆ. ಇವು ಬಾಯಿಯ ಒಳಪದರ ಹಾಳುಮಾಡುವುದಲ್ಲದೇ, ಕರುಳಿನ ಊತ ಹೆಚ್ಚಿಸಿ ಬಿ ವಿಟಮಿನ್ ಕೊರತೆಯನ್ನು ಉಂಟುಮಾಡುತ್ತವೆ.
ಗ್ಯಾಸ್ಟ್ರೈಟೀಸ್ ಮತ್ತು ಟೂತ್ಪೇಸ್ಟ್ ಈ ಎರಡೂ ಇಂದು ಬಿಟ್ಟಿರಲಾರದ ಸಂಗತಿಗಳಾಗಿವೆ
ಆದ್ದರಿಂದ ಬಾಯಿಹುಣ್ಣಿಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ.
![](https://shikarinews.com/wp-content/uploads/2021/04/images-6.jpeg)
ಗ್ಲಿಸರಿನ್ ಬಳಕೆ ಎಷ್ಟುಸರಿ?
ಬಾಯಿಹುಣ್ಣಗಳಿಗೆ ಗ್ಲಿಸರಿನ್ ಎಂಬ ರಾಸಾಯನಿಕ ಲೇಪ ಮಾಡಿಕೊಳ್ಳುವ ಮೊದಲು ಅದರ ದುಷ್ಪರಿಣಾಮಗಳನ್ನೊಮ್ಮೆ ಓದಿದರೆ, ಅದು ಇನ್ನಷ್ಟು ಮತ್ತಷ್ಟು ಬಾಯಿ ರಸವನ್ನು ಒಣಗಿಸಿ ಗಾಯಗಳನ್ನು ಹೆಚ್ಚು ಮಾಡುತ್ತದೆ ಎಂದು ತಿಳಿಯುತ್ತದೆ!!!
•••••
ತಕ್ಷಣದ ಪರಿಹಾರವೇನು?
ಶುದ್ಧ ಅರಿಶಿಣವನ್ನು ಮತ್ತು ಸ್ವಲ್ಪ ಅಡುಗೆ ಉಪ್ಪನ್ನು ಅರ್ಧಲೋಟ ಉಗುರು ಬೆಚ್ಚಗಿನ ನೀರಿಗೆ ಹಾಕಿ ದಿನಕ್ಕೆ ಎರಡು ಬಾರಿ ಬಾಯಿ ಮುಕ್ಕಳಿಸಿ.
ಅಥವಾ
ಅಥರ್ವ ಆಯುರ್ದಂತಮ್ ದಂತದ್ರವ ಬಳಸಿ, ಅದು ಒಂದೆರಡು ದಿನಗಳಲ್ಲೇ ಪರಿಹರಿಸುತ್ತದೆ.
![](https://shikarinews.com/wp-content/uploads/2021/04/images-7.jpeg)
ಶಾಶ್ವತ ಪರಿಹಾರವೇನು?
• ತಕ್ಷಣ ಟೂತ್ಪೇಸ್ಟ್ ಬಳಕೆ ನಿಲ್ಲಿಸಿ.
• ನಿಧಾನವಾಗಿ ಜೀರ್ಣವಾಗಿ ಕರುಳಿನಲ್ಲಿ ಆಮ್ಲೀಯತೆ ಬಿಡುಗಡೆ ಮಾಡುವ ಆಹಾರ ಸೇವಿಸಬೇಡಿ.
• ಬಾಯಿ ಸ್ವಚ್ಛಮಾಡಲು ನಿತ್ಯವೂ ಜೇಷ್ಠಮಧು, ನಿಂಬ, ತ್ರಿಫಲಾ ಮುಂತಾದ ದ್ರವ್ಯಗಳನ್ನೊಳಗೊಂಡ ಅಥರ್ವ ಆಯುರ್ದಂತಮ್ ದಂತದ್ರವ ಬಳಸಿ. ಇದು ಕರುಳಿನ ಆಮ್ಲೀಯತೆಯನ್ನೂ, ಬಾಯಿಹುಣ್ಣು ಉಂಟುಮಾಡುವ ಊತವನ್ನೂ ನಿವಾರಣೆ ಮಾಡುವುದಲ್ಲದೇ. ಕರುಳಿನಲ್ಲಿ ವಿಟಮಿನ್ ಬಿ ಉತ್ಪತ್ತಿಯಾಗುವುದನ್ನು ಹೆಚ್ಚಿಸುತ್ತದೆ. ಶಾಶ್ವತ ಪರಿಹಾರ ಮಾಡುತ್ತದೆ.
ಅಥರ್ವ ಆಯುರ್ದಂತಮ್ ಬಗ್ಗೆ ಹೆಚ್ಚಿನಮಾಹಿತಿಗೆ ಸಂಪರ್ಕಿಸಿ
9916995513
(10am to 6pm)
ಆತ್ಮೀಯರೇ,
ನಮ್ಮ ಕರುಳುಗಳ ಆರೋಗ್ಯವೇ ನಮ್ಮ ಆರೋಗ್ಯ. ಹಾಗಾಗಿ ಶುದ್ಧ ಆಹಾರ ಪದ್ಧತಿಯನ್ನು ತಪ್ಪದೇ ಪಾಲಿಸಿರಿ.
![](https://shikarinews.com/wp-content/uploads/2020/08/IMG_20200716_080621_875-1.jpg)
8792290274
9148702645
ವಿಶ್ವಹೃದಯಾಶೀರ್ವಾದವಂ ಬಯಸಿ
-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)