ಶಿಕಾರಿಪುರ :ಡಾ.ಬಿ.ಆರ್‌ ಅಂಬೇಡ್ಕರ್ ಜಯಂತಿ ಸಾರ್ವಜನಿಕ ಆಚರಣೆಗೆ ಅವಕಾಶ‌ ನೀಡಬೇಕು : ಡಿ.ಎಸ್ಎಸ್ ಸಂಚಾಲಕ ಜಗದೀಶ್ ಆಗ್ರಹ…!

ಶಿಕಾರಿಪುರ :ಡಾ.ಬಿ.ಆರ್‌ ಅಂಬೇಡ್ಕರ್ ಜಯಂತಿ ಸಾರ್ವಜನಿಕ ಆಚರಣೆಗೆ ಅವಕಾಶ‌ ನೀಡಬೇಕು : ಡಿ.ಎಸ್ಎಸ್ ಸಂಚಾಲಕ ಜಗದೀಶ್ ಆಗ್ರಹ…!

ಶಿಕಾರಿಪುರ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆಗೆ ಅವಕಾಶ ನೀಡಬೇಕು ಎಂದು ಡಿಎಸ್ಎಸ್ ತಾಲೂಕ್ ಸಂಚಾಲಕ ಜಗದೀಶ್ ಆಗ್ರಹಿಸಿದ್ದಾರೆ.

ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು

ಕರೋನ ಇರುವುದುರಿಂದ ಸರಳವಾಗಿ ಆಚರಣೆ ಮಾಡಿಬೇಕು ಎಂದು ತಹಶಿಲ್ದಾರರು ಪೂರ್ವಭಾವಿ ಸಭೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಕರೋನಾ ಇರೋದರಿಂದ ಆಚರಣೆಯನ್ನು ಮಾಡಿರುವುದಿಲ್ಲ ಆದರೆ ಈ ಬಾರಿ ಆಚರಣೆ ನಡೆಸಲು ನಿರ್ಬಂಧ ಇರುತ್ತಿದ್ದು ನಿರ್ಬಂಧ ಕೇವಲ ಮಹಾನ್ ನಾಯಕರ ಜಯಂತಿ ಆಚರಣೆಗಳಿಗೆ ಮಾತ್ರ ರಾಜಕೀಯ ಪಕ್ಷಗಳಿಗೆ ಇಲ್ಲದ ನಿಯಮ‌‌ ದಾರ್ಶನಿಕರ ಜಯಂತಿಗಳುಗೆ ಏಕೆ ಎಂದು ಪಶ್ನಿಸಿದರು.

ಸರ್ಕಾರಿ ಆಚರಣೆ ಮಾಡುವ ಸಂದರ್ಭದಲ್ಲಿ ಬೆರಳೆಣಿಕೆ ಅಧಿಕಾರಿಗಳು ಆಗಮಿಸುತ್ತಾರೆ ಇದು ಕಟಚಾರಕ್ಕೆ ಮಾಡುತ್ತಾರೆ.

ಅದ್ದರಿಂದ ತಹಶಿಲ್ದಾರ ಹಾಗೂ ಪೋಲಿಸ್ ಇಲಾಖೆ ನಮ್ಮ ಡಿಎಸ್ ಎಸ್ ಸಂಘಟನೆಗಳು ಹಳ್ಳಿಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಮಾಡಲು ನಿರ್ಧಾರ ಮಾಡಿದ್ದು ಎಲ್ಲಾ ಅಧಿಕಾರಿಗಳು ಸಹಕಾರ ನೀಡಬೇಕು ಕೋರೋನ ನಿಯಮ ಪಾಲನೆ ಮಾಡಿ ನಾವು ಜಯಂತಿ ಆಚರಣೆ ಮಾಡುತ್ತೇವೆ ಎಂದರು.

23 ಏಪ್ರೀಲ್ ರಂದು ನಾವು ಅಂಬೇಡ್ಕರ್ ವಾದ ಡಿಎಸ್ ಎಸ್ ಅವರ ಸಂಘಟನೆ ಮೂಲಕ ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ಆಚರಣೆ ಮಾಡಲಿದ್ದೇವೆ ಎಂದರು

ಈ‌ ಸಂದರ್ಭದಲ್ಲಿ ಡಿಎಸ್ ಎಸ್ ಸಂಘಟನೆಯ ಪರಮೇಶ್ , ಹನುಮಂತಪ್ಪ, ಪ್ರಶಾಂತ್ ಪ್ರತಿಬಿಂಬ, ಮಧು , ಶಿವಪ್ಪ, ರಾಮು ಇಟ್ಟಿಗಿ, ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!