ಶಿಕಾರಿಪುರ :ಕಾಳೇನಹಳ್ಳಿ ಶಿವಯೋಗ ಮಂದಿರದ ರೇವಣಸಿದ್ದ ಸ್ವಾಮಿಜೀ ಲಿಂಗೈಕ್ಯ…!

ಶಿಕಾರಿಪುರ :ಕಾಳೇನಹಳ್ಳಿ ಶಿವಯೋಗ ಮಂದಿರದ ರೇವಣಸಿದ್ದ ಸ್ವಾಮಿಜೀ ಲಿಂಗೈಕ್ಯ…!

ಶಿಕಾರಿಪುರ ತಾಲೂಕು ಕಾಳೇನಹಳ್ಳಿಯ ರೇವಣಸಿದ್ಧ ಮಹಾಸ್ವಾಮಿ ನಿನ್ನೆ ತಡರಾತ್ರಿ ಲಿಂಗೈಕ್ಯರಾಗಿದ್ದಾರೆ.

ಬಿಜಾಪುರ ಜಿಲ್ಲೆ ಬಸವನಬಾಗೇವಾಡಿಯಲ್ಲಿ ಜನಿಸಿದ ಸ್ವಾಮೀಜಿ ಅವರು ಬಾಲ್ಯಾವಸ್ಥೆಯಲ್ಲಿಯೇ ಸನ್ಯಾಸ ಸ್ವೀಕರಿಸಿ, ಆಧ್ಯಾತ್ಮಿಕ ಉನ್ನತಿ ಸಾಧಿಸಿದ್ದರು.

ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಶಿವಯೋಗ ಮಂದಿರದ 3ನೇ ಶ್ರೀಗಳು ದಿನಾಂಕ 1-02-1977 ರಂದು ಪಟ್ಟಾಧಿಕಾರ ವಹಿಸಿಕೊಂಡು ಸುಮಾರು 44 ವರ್ಷಗಳ ಕಾಲ ಮಠವನ್ನು ಮುನ್ನಡೆಸಿದ ಶಿಕಾರಿಪುರದ ನಡೆದಾಡುವ ದೇವರು, ಶ್ರೀ.ಮ.ನಿ.ಪ್ರ. ರೇವಣಸಿದ್ದ ಸ್ವಾಮಿಗಳು ಲಿಂಗೈಕ್ಯರಾಗಿದ್ದು ಸಾವಿರಾರು ಭಕ್ತರ ವೃಂದವನ್ನು ಬಿಟ್ಟುಹೋಗಿದ್ದಾರೆ.

ಸಮಾಜಮುಖಿ ಚಿಂತನೆಗಳ ಮೂಲಕ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು ಎಲ್ಲಾ ಧರ್ಮದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.

ಕೃಷಿಯಲ್ಲಿ ಸ್ವಾಮಿಜಿ ಆಸಕ್ತಿ:
ಸ್ವಾಮಿಜೀ ಅವರು ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು ತಮ್ಮ ಗುರುಗಳಾದ ರುದ್ರಮುನಿ ಸ್ವಾಮಿಜೀ ಅವರು ಕೃಷಿ ಬಗ್ಗೆ ಹೆಚ್ಚಿನ‌ ಸಮಯ ನೀಡುತ್ತಿದ್ದರು ಮಠದ ನೂರಾರು ಎಕ್ಕರೆ ಜಮೀನು ಇದ್ದು ಸ್ವತಃ ಸ್ವಾಮಿಜೀಗಳು ವ್ಯಾವಸಾಯ ಮಾಡುತ್ತಿದ್ದರು‌.

ಮಕ್ಕಳಿಲ್ಲದ ದಂಪತಿಗೆ ನಾಟಿ ಔಷಧಿ:

ಸ್ವಾಮಿಜೀ ಗಳು ವಿಷೇಶವಾಗಿ ಮಕ್ಕಳಿಲ್ಲದ ದಂಪತಿಗಳಿಗೆ ಗಿಡಮೂಳೆಕೆ‌ ಔಷಧವನ್ನು ನೀಡಿ ದಂಪತಿಗಳ ಕೊರಗನ್ನು ನಿಗಿಸುತ್ತಿದ್ದರು ಜಾತಿ, ಧರ್ಮ ಭೇದವಿಲ್ಲದೆ ನಂಬಿ ಬಂದ ಎಲ್ಲಾರಿಗೂ ಅವರ ಬೇಡಿಕೆ ಈಡೆರಿಸುತ್ತಿದ್ದರು.

ಹಿಂದೂ ಧರ್ಮಮಾತ್ರವಲ್ಲ ಮುಸ್ಲಿಂ ಹಾಗೂ ಬೇರೆ ಬೇರೆ ಧರ್ಮದ ಭಕ್ತರು ಮಠಕ್ಕೆ ಆಗಮಿಸುತ್ತಿದ್ದರು.

ಈ‌ ರೀತಿ ಸಮಾಜಿಕ ಸೇವೆ, ಕೃಷಿ, ಧಾರ್ಮಿಕ ಕಾರ್ಯಕ್ರಮಗಳು ನಡೆಸಿಕೊಂಡು ಸುಧೀರ್ಘ ಧರ್ಮ ಪ್ರಚಾರ ನಡೆಸಿ ಅನೇಕ ಭಕ್ತ ವೃಂದ ಬಿಟ್ಟು ಸ್ವಾಮಿಜೀ ಲಿಂಗೈಕ್ಯರಾಗಿದ್ದಾರೆ.

ಸಿಎಂ ಬಿ.ಎಸ್ ಯಡಿಯೂರಪ್ಪ ಸಂತಾಪ ಸೂಚನೆ:

ಸ್ವಾಮಿಜೀ ನಿಧಾನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ‌ ಬಿ.ಎಸ್ ವೈ ಮಠದ ಶ್ರದ್ಧೆಯ ಭಕ್ತರಾಗಿದ್ದರು‌ ಅಂತ್ಯ ಸಂಸ್ಕಾರ ಕಾರ್ಯಕ್ಕೆ ಸಿಎಂ ಬಿ.ಎಸ್ ವೈ ಆಗಮಿಸುವ ಸಾಧ್ಯತೆ ಇದೆ.

News By- Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!