ಶಿವಮೊಗ್ಗ : ಸ್ವಕ್ಷೇತ್ರದಲ್ಲಿ ಮೂರು ದಿನ ಸಿಎಂ ಯಡಿಯೂರಪ್ಪ ಪ್ರವಾಸ..!
![ಶಿವಮೊಗ್ಗ : ಸ್ವಕ್ಷೇತ್ರದಲ್ಲಿ ಮೂರು ದಿನ ಸಿಎಂ ಯಡಿಯೂರಪ್ಪ ಪ್ರವಾಸ..!](https://shikarinews.com/wp-content/uploads/2021/02/IMG-20201018-WA0114-678x381-1.jpg)
ಶಿವಮೊಗ್ಗ :ಫೆ.16ರಂದು ಭದ್ರಾವತಿಗೆ ಮುಖ್ಯಮಂತ್ರಿ ಭೇಟಿ
ಶಿವಮೊಗ್ಗ: ಫೆ.14ರಿಂದ 16ರವರೆಗೂ ಮೂರು ದಿನಗಳ ಕಾಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಫೆ.14ರ ಪ್ರವಾಸ ವಿವರ:
ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ 2.25ಕ್ಕೆ ನ್ಯಾಮತಿ ತಾಲೂಕಿನ ಸುರಗೊಂಡನಕೊಪ್ಪಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸಂತ ಸೇವಾಲಾಲ್ ಅವರ 282ನೆಯ ಜಯಂತ್ಯೋತ್ಸವವನ್ನು ಉದ್ಘಾಟಿಸಲಿದ್ದಾರೆ.
ಸಂಜೆ 4.50ಕ್ಕೆ ಶಿಕಾರಿಪುರಕ್ಕೆ ಆಗಮಿಸುವ ಮುಖ್ಯಮಂತ್ರಿಯವರು 5 ಗಂಟೆಗೆ ಶಿಕಾರಿಪುರ ತಾಲೂಕು ಮಟ್ಟದ ಅಧಿಕಾರಿಗಳ(ಕೆಡಿಪಿ) ಸಭೆ ನಡೆಸಲಿದ್ದಾರೆ. ಅಂದು ಶಿಕಾರಿಪುರದಲ್ಲಿಯೇ ಅವರು ವಾಸ್ತವ್ಯ ಹೂಡಲಿದ್ದಾರೆ.
ಫೆ.15ರ ಪ್ರವಾಸ ವಿವರ:
ಬೆಳಗ್ಗೆ 10.15ಕ್ಕೆ ಶಿಕಾರಿಪುರದಿಂದ ಹೊರಟು 10.35ಕ್ಕೆ ಶಿವಮೊಗ್ಗದ ಸರ್ಕ್ಯೂಟ್ ಹೌಸ್ ಹೆಲಿಪ್ಯಾಡ್’ಗೆ ಆಗಮಿಸಿ ವರ್ಚುವಲ್ ಮೂಲಕ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 12.30 ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಿವಮೊಗ್ಗ-ಭದ್ರಾವತಿ ಪ್ರದೇಶದಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.34, 49 ಹಾಗೂ 52ರ ಬದಲಿ ರಸ್ತೆಯ ಮೇಲ್ಸೇತುವೆ ಕಾಮಗಾರಿಗೆ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಂತರ ವಿವಿಧ ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಅವರು ಅಂದು ಶಿವಮೊಗ್ಗದಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ.
ಫೆ.16ರ ಪ್ರವಾಸ ವಿವರ:
ಅಂದು ಮುಂಜಾನೆ ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಅವರು, ಮಧ್ಯಾಹ್ನ 3 ಗಂಟೆಗೆ ಭದ್ರಾವತಿ ತಾಲೂಕು ಆನವೇರಿ ಮಾರಮ್ಮ ದೇವಸ್ಥಾನ ಉದ್ಘಾಟಿಸಲಿದ್ದಾರೆ.
3.15ಕ್ಕೆ ತಾಲೂಕಿನ ಗುಡುಮಘಟ್ಟದಲ್ಲಿ ಈಶ್ವರ ದೇವಸ್ಥಾನ ಉದ್ಘಾಟಿಸಲಿರುವ ಮುಖ್ಯಮಂತ್ರಿಗಳು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 4 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
News By: Raghu Shikari-7411515737