ಶಿವಮೊಗ್ಗ: ಭಯನಕ ಶಬ್ದಕ್ಕೆ ತತ್ತರಿಸಿದ ಜನತೆ ಲಘು ಭೂಕಂಪದ ಅನುಭವ ಭಯಭೀತಗೊಂಡ ಜನತೆ…!
![ಶಿವಮೊಗ್ಗ: ಭಯನಕ ಶಬ್ದಕ್ಕೆ ತತ್ತರಿಸಿದ ಜನತೆ ಲಘು ಭೂಕಂಪದ ಅನುಭವ ಭಯಭೀತಗೊಂಡ ಜನತೆ…!](https://shikarinews.com/wp-content/uploads/2021/01/IMG-20210121-WA0037.jpg)
ಶಿವಮೊಗ್ಗ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಭೂಕಂಪದ ಅನುಭವ ಕಂಡುಬಂದಿದ್ದು ಜನತೆ ಸಾಕಷ್ಟು ಭಯಭೀತರಾಗಿದ್ದಾರೆ.
ಶಿವಮೊಗ್ಗ ನಗರ ಬಸ್ ನಿಲ್ದಾಣ ಬಸ್ ಗಳು ಆಲುಗಾಡಿವೆ ಎಂದು ಕೆ.ಎಸ್ ಆರ್ ಟಿಸಿ ಚಾಲಕರೊಬ್ಬರು ಮಾಹಿತಿ ನೀಡಿದ್ದಾರೆ.
![](https://shikarinews.com/wp-content/uploads/2021/01/IMG-20210121-WA0036-1024x577.jpg)
ಇನ್ನೂ ಶಿಕಾರಿಪುರ ತಾಲೂಕಿನ ಈಸೂರು, ತರಲಘಟ, ಅಂಜನಾಪುರ, ಈ ರೀತಿ ಅನೇಕ ಭಾಗಗಳಲ್ಲಿ ಏಕ ಏಕಿ ದೊಡ್ಡದೊಂದು ಶಬ್ದ ಕೇಳಿಬಂದಿದ್ದು ಮಲಗಿದ್ದ ಜನರು ಎದ್ದು ರಸ್ತೆಗೆ ಬಂದಿದ್ದಾರೆ.
ನಿಗೂಢ ಶಬ್ದದ ಅನುಭವಾಗಿದ್ದು ಮಲಗಿದ್ದ ಜನರು ಮನೆಯಿಂದ ಓಡಿ ಬಂದಿದ್ದಾರೆ ಶಿವಮೊಗ್ಗದ ಕೆಲವು ಕಡೆ ಮನೆ ಕಿಟಕಿ ಗಾಜು, ಬಾಗಿಲು ಈ ರೀತಿ ಅನೇಕ ಶಬ್ದ ಕೇಳಿಬಂದಿದೆ.
ಹಾಗೂ ಶಿಕಾರಿಪುರ ಪಟ್ಟದಲ್ಲೂ ಬಹಳ ದೊಡ್ಡ ತೀರ್ಥಹಳ್ಳಿ ಭದ್ರಾವತಿ,ಸಾಗರ, ತಾಲೂಕುಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ದೊಡ್ಡಮಟ್ಟದಲ್ಲಿ ಶಬ್ದ ಕೇಳಿಬಂದಿದ್ದು ಜನರ ಆತಂಕಗೊಂಡಿದ್ದಾರೆ.
ಅದರೆ ಯಾವುದೇ ಅನಾಹುತ ಘಟನೆ ನಡೆದಿಲ್ಲ ಯಾವುದೇ ಜೀವ ಹಾನಿ ಮನೆಗಳು ಹಾನಿಯಾಗಿಲ್ಲ.
ಈ ಬಗ್ಗೆ ಮಾಪನ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮಾಹಿತಿ ನೀಡಬೇಕಾಗಿದೆ.
News by- Raghu Shikari-7411515737