ಶಿವಮೊಗ್ಗ: ಭಯನಕ ಶಬ್ದಕ್ಕೆ ತತ್ತರಿಸಿದ ಜನತೆ ಲಘು ಭೂಕಂಪದ ಅನುಭವ ಭಯಭೀತಗೊಂಡ ಜನತೆ…!

ಶಿವಮೊಗ್ಗ: ಭಯನಕ ಶಬ್ದಕ್ಕೆ ತತ್ತರಿಸಿದ ಜನತೆ ಲಘು ಭೂಕಂಪದ ಅನುಭವ ಭಯಭೀತಗೊಂಡ ಜನತೆ…!

ಶಿವಮೊಗ್ಗ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಭೂಕಂಪದ ಅನುಭವ ಕಂಡುಬಂದಿದ್ದು ಜನತೆ ಸಾಕಷ್ಟು ಭಯಭೀತರಾಗಿದ್ದಾರೆ.

ಶಿವಮೊಗ್ಗ ನಗರ ಬಸ್ ನಿಲ್ದಾಣ ಬಸ್ ಗಳು ಆಲುಗಾಡಿವೆ ಎಂದು ಕೆ.ಎಸ್ ಆರ್ ಟಿಸಿ ಚಾಲಕರೊಬ್ಬರು ಮಾಹಿತಿ ನೀಡಿದ್ದಾರೆ.

ಇನ್ನೂ ಶಿಕಾರಿಪುರ ತಾಲೂಕಿನ ಈಸೂರು, ತರಲಘಟ, ಅಂಜನಾಪುರ, ಈ ರೀತಿ ಅನೇಕ ಭಾಗಗಳಲ್ಲಿ ಏಕ ಏಕಿ ದೊಡ್ಡದೊಂದು ಶಬ್ದ ಕೇಳಿಬಂದಿದ್ದು ಮಲಗಿದ್ದ ಜನರು ಎದ್ದು ರಸ್ತೆಗೆ ಬಂದಿದ್ದಾರೆ.

ನಿಗೂಢ ಶಬ್ದದ ಅನುಭವಾಗಿದ್ದು ಮಲಗಿದ್ದ ಜನರು ಮನೆಯಿಂದ ಓಡಿ ಬಂದಿದ್ದಾರೆ ಶಿವಮೊಗ್ಗದ ಕೆಲವು ಕಡೆ ಮನೆ ಕಿಟಕಿ ಗಾಜು, ಬಾಗಿಲು ಈ ರೀತಿ ಅನೇಕ ಶಬ್ದ ಕೇಳಿಬಂದಿದೆ.

ಹಾಗೂ ಶಿಕಾರಿಪುರ ಪಟ್ಟದಲ್ಲೂ ಬಹಳ ದೊಡ್ಡ ತೀರ್ಥಹಳ್ಳಿ ಭದ್ರಾವತಿ,ಸಾಗರ, ತಾಲೂಕುಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ದೊಡ್ಡಮಟ್ಟದಲ್ಲಿ ಶಬ್ದ ಕೇಳಿಬಂದಿದ್ದು ಜನರ ಆತಂಕಗೊಂಡಿದ್ದಾರೆ.

ಅದರೆ ಯಾವುದೇ ಅನಾಹುತ ಘಟನೆ ನಡೆದಿಲ್ಲ ಯಾವುದೇ ಜೀವ ಹಾನಿ ಮನೆಗಳು ಹಾನಿಯಾಗಿಲ್ಲ.

ಈ ಬಗ್ಗೆ ಮಾಪನ‌ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮಾಹಿತಿ ನೀಡಬೇಕಾಗಿದೆ.

News by- Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!