ಶಿಕಾರಿಪುರ :ಅಸ್ಪೃಶ್ಯತೆ ನಿವಾರಣೆ ಕುರಿತು ಸಂಚಾರಿ ಬೀದಿ ನಾಟಕ ಜಾಥಾ ಕೆ.ಎಸ್ ಗುರುಮೂರ್ತಿ ಚಾಲನೆ…!

ಶಿಕಾರಿಪುರ :ಅಸ್ಪೃಶ್ಯತೆ ನಿವಾರಣೆ ಕುರಿತು ಸಂಚಾರಿ ಬೀದಿ ನಾಟಕ ಜಾಥಾ ಕೆ.ಎಸ್ ಗುರುಮೂರ್ತಿ ಚಾಲನೆ…!


ಶಿಕಾರಿಪುರ: ಭಾರತಕ್ಕೆ ಸಂವಿಧಾನದ ರಚನೆಯಲ್ಲಿ ಅಬೇಡ್ಕರ್ ಅವರು ಪ್ರಮುಖರು ಪಾತ್ರ ವಹಿಸಿದ್ದರು ಅವರ ಉದ್ದೇಶ ಇಡೀ ದೇಶದಲ್ಲಿ ಸಮಾನತೆ, ಸ್ವಾತಂತ್ರ್ಯ ಸಿಗಲಿ ಕೆಳ ವರ್ಗದವರು ಎಲ್ಲಾರಂತೆ ಸಮಾನತೆಯಿಂದ ಬದುಕಲಿ ಅವರ ಸಂದೇಶ ಸಾರುವ ಈ ಜಾಥಕ್ಕೆ ಇಂದು ತಾಲೂಕಿನಲ್ಲಿ ಚಾಲನೆ ದೊರೆತಿದೆ ಎಂದು ಮಲೆನಾಡು ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಕೆ.ಎಸ್ ಗುರೂಮೂರ್ತಿ ಹೇಳಿದರು.

ಕೇಂದ್ರ ರಾಜ್ಯ ಸರ್ಕಾರದ ಉದ್ದೇಶ ಇವತ್ತಿಗೂ ಕೆಲವು ಕಡೆ ಇರುವ ಸಮಾಜಿಕ ಪಿಡುಗು ಅಸಮಾನತೆ ಜಾತೀಯತೆ ತೊಲಗಬೇಕು ಎಂಬ ಉದ್ದೇಶದಿಂದ ಈ ಜಾಥ ಇಡೀ ರಾಜ್ಯಾದ್ಯಂತ ನಡೆಯುತ್ತಿದೆ ಮನುಷ್ಯನ ನಡುವೆ ಸ್ನೇಹದ ಕೊಂಡಿ ಇರಬೇಕು ಎಲ್ಲಾರಿಗೂ ಸಮಾನತೆಯಿಂದ ಬದುಕಬೇಕು ಈನಿಟ್ಟಿನಲ್ಲ ಬಿ.ಎಸ್ ವೈ ಕೂಡ ಸಮಾಜಿಕವಾಗಿ ಜೀತಪದ್ದತಿ ರದ್ದು ಮಾಡಲು ಹೋರಾಟ ನಡೆಸಿದ್ದರು.

ನಮ್ಮ ಸಮಾಜದಲ್ಲಿ ಜಾಗೃತಿ ಮೂಡಬೇಕು ಇದಕ್ಕಾಗಿ ಇಡೀ ತಾಲೂಕಿನಲ್ಲಿ ಹಳ್ಳಿ ಹಳ್ಳಿಯಲ್ಲೂ ಈ ಜಾಥ ಸಂಚಾರ ಜಾಗೃತಿ ಮೂಡಿಸಲಿದೆ ನಮ್ಮಲಿ ಇರುವ ಜಾತಿ ಪದ್ದತಿ ನಿರ್ಮಾಲನೆಯಾಗಬೇಕು ಸಹ ಬಾಳ್ವೆ ಸಮಾಜದಲ್ಲಿ ಮೂಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ತಾ.ಪಂ ಇಓ ಪರಮೇಶ್ವರ್, ಸಮಾಜ ಕಲ್ಯಾಣಧಿಕಾರಿ ಶ್ರೀನಿವಾಸ, ತಾ.ಪಂ ಸದಸ್ಯರಾದ ಮಲ್ಲಿಕಾರ್ಜುನ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್, ನೌಕರ ಸಂಘದ ಅಧ್ಯಕ್ಷ ಎ.ಚಿನ್ನಪ್ಪ, ರಾಮಾನಾಯ್ಕ್, ಸಿಬ್ಬಂದಿಗಳಾದ ಮಹೇಶ್ ,ನೃಪತುಂಗನ ನಾಯ್ಕ್ ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!