ಶಿಕಾರಿಪುರ :ಅಸ್ಪೃಶ್ಯತೆ ನಿವಾರಣೆ ಕುರಿತು ಸಂಚಾರಿ ಬೀದಿ ನಾಟಕ ಜಾಥಾ ಕೆ.ಎಸ್ ಗುರುಮೂರ್ತಿ ಚಾಲನೆ…!
![ಶಿಕಾರಿಪುರ :ಅಸ್ಪೃಶ್ಯತೆ ನಿವಾರಣೆ ಕುರಿತು ಸಂಚಾರಿ ಬೀದಿ ನಾಟಕ ಜಾಥಾ ಕೆ.ಎಸ್ ಗುರುಮೂರ್ತಿ ಚಾಲನೆ…!](https://shikarinews.com/wp-content/uploads/2020/11/IMG_20201104_175721_976.jpg)
ಶಿಕಾರಿಪುರ: ಭಾರತಕ್ಕೆ ಸಂವಿಧಾನದ ರಚನೆಯಲ್ಲಿ ಅಬೇಡ್ಕರ್ ಅವರು ಪ್ರಮುಖರು ಪಾತ್ರ ವಹಿಸಿದ್ದರು ಅವರ ಉದ್ದೇಶ ಇಡೀ ದೇಶದಲ್ಲಿ ಸಮಾನತೆ, ಸ್ವಾತಂತ್ರ್ಯ ಸಿಗಲಿ ಕೆಳ ವರ್ಗದವರು ಎಲ್ಲಾರಂತೆ ಸಮಾನತೆಯಿಂದ ಬದುಕಲಿ ಅವರ ಸಂದೇಶ ಸಾರುವ ಈ ಜಾಥಕ್ಕೆ ಇಂದು ತಾಲೂಕಿನಲ್ಲಿ ಚಾಲನೆ ದೊರೆತಿದೆ ಎಂದು ಮಲೆನಾಡು ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಕೆ.ಎಸ್ ಗುರೂಮೂರ್ತಿ ಹೇಳಿದರು.
![](https://shikarinews.com/wp-content/uploads/2020/11/IMG_20201104_175725_029-1024x768.jpg)
ಕೇಂದ್ರ ರಾಜ್ಯ ಸರ್ಕಾರದ ಉದ್ದೇಶ ಇವತ್ತಿಗೂ ಕೆಲವು ಕಡೆ ಇರುವ ಸಮಾಜಿಕ ಪಿಡುಗು ಅಸಮಾನತೆ ಜಾತೀಯತೆ ತೊಲಗಬೇಕು ಎಂಬ ಉದ್ದೇಶದಿಂದ ಈ ಜಾಥ ಇಡೀ ರಾಜ್ಯಾದ್ಯಂತ ನಡೆಯುತ್ತಿದೆ ಮನುಷ್ಯನ ನಡುವೆ ಸ್ನೇಹದ ಕೊಂಡಿ ಇರಬೇಕು ಎಲ್ಲಾರಿಗೂ ಸಮಾನತೆಯಿಂದ ಬದುಕಬೇಕು ಈನಿಟ್ಟಿನಲ್ಲ ಬಿ.ಎಸ್ ವೈ ಕೂಡ ಸಮಾಜಿಕವಾಗಿ ಜೀತಪದ್ದತಿ ರದ್ದು ಮಾಡಲು ಹೋರಾಟ ನಡೆಸಿದ್ದರು.
![](https://shikarinews.com/wp-content/uploads/2020/11/IMG_20201104_175728_730-1024x768.jpg)
ನಮ್ಮ ಸಮಾಜದಲ್ಲಿ ಜಾಗೃತಿ ಮೂಡಬೇಕು ಇದಕ್ಕಾಗಿ ಇಡೀ ತಾಲೂಕಿನಲ್ಲಿ ಹಳ್ಳಿ ಹಳ್ಳಿಯಲ್ಲೂ ಈ ಜಾಥ ಸಂಚಾರ ಜಾಗೃತಿ ಮೂಡಿಸಲಿದೆ ನಮ್ಮಲಿ ಇರುವ ಜಾತಿ ಪದ್ದತಿ ನಿರ್ಮಾಲನೆಯಾಗಬೇಕು ಸಹ ಬಾಳ್ವೆ ಸಮಾಜದಲ್ಲಿ ಮೂಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ ಇಓ ಪರಮೇಶ್ವರ್, ಸಮಾಜ ಕಲ್ಯಾಣಧಿಕಾರಿ ಶ್ರೀನಿವಾಸ, ತಾ.ಪಂ ಸದಸ್ಯರಾದ ಮಲ್ಲಿಕಾರ್ಜುನ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್, ನೌಕರ ಸಂಘದ ಅಧ್ಯಕ್ಷ ಎ.ಚಿನ್ನಪ್ಪ, ರಾಮಾನಾಯ್ಕ್, ಸಿಬ್ಬಂದಿಗಳಾದ ಮಹೇಶ್ ,ನೃಪತುಂಗನ ನಾಯ್ಕ್ ಇದ್ದರು.
News by: Raghu Shikari-7411515737