ಶಿಕಾರಿಪುರ: ಭೂ ಖರೀದಿಗೆ ಗರಿಷ್ಠ ಮಿತಿಯನ್ನು ಸರ್ಕಾರ ನಿಗದಿ ಮಾಡಬೇಕು ಇಲ್ಲವಾದರೇ ಸಿಎಂ ನಿವಾಸ ಮುತ್ತಿಗೆ: ಉಳ್ಳಿ ದರ್ಶನ್…!

ಶಿಕಾರಿಪುರ: ಭೂ ಖರೀದಿಗೆ ಗರಿಷ್ಠ ಮಿತಿಯನ್ನು ಸರ್ಕಾರ ನಿಗದಿ ಮಾಡಬೇಕು ಇಲ್ಲವಾದರೇ ಸಿಎಂ ನಿವಾಸ ಮುತ್ತಿಗೆ: ಉಳ್ಳಿ ದರ್ಶನ್…!

ಶಿಕಾರಿಪುರ: ರಾಜ್ಯ ಸರ್ಕಾರ ಈ ಹಿಂದೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸುಗ್ರೀವಾಜ್ನೆ ಮೂಲಕ ಭೂ ಸುಧಾರಣಾ ಕಾಯಿದೆಯನ್ನು ಜಾರಿಗೆ ತಂದು ಒಬ್ಬ ವ್ಯಕ್ತಿ ಕೇವಲ 108 ಎಕರೆಗಳವರೆಗ ಜಮೀನು ಖರೀದಿಸಲು ಅನುಕೂಲ ಮಾಡಿಕೊಟ್ಟಿತ್ತು. ಆದರೀಗ ಅದೇ ಸುಗ್ರೀವಾಜ್ಞೆ ಗರಿಷ್ಠ ಮಿತಿಗೇರಿಸುವುದರ ಮೂಲಕ ಒಬ್ಬರು ಎಷ್ಟು ಎಕರೆ ಜಮೀನು ಬೇಕಾದರೂ ಖರೀದಿಸುವಂತೆ ನಿಯಮ ಜಾರಿಗೆ ತರಲು ಮುಂದಾಗಿದೆ ಇದು ರೈತ ವಿರೋಧಿ ನೀತಿ ಎಂದು ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯ ಮತ್ತು ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಉಳ್ಳಿ ದರ್ಶನ್ ಆರೋಪಿಸಿದರು.

ಪಟ್ಟಣದ ಸುದ್ದಿ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಈಗಾಗಲೇ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ತಾವು ರೈತ ವಿರೋಧಿಯಲ್ಲ ರೈತರ ಮಗ ಎಂದು ಹೇಳುವ ಅವರು, ಸುಗ್ರೀವಾಜ್ನೆ ಮೂಲಕ ಭೂ ಸುಧಾರಣಾ ಕಾಯಿದೆಯನ್ನು ಜಾರಿಗೆ ತರುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ.

ವಿಧಾನಸಭಾ ಅಧಿವೇಶನದ ವೇಳೆ ಕಂದಾಯ ಸಚಿವ ಆರ್ ಅಶೋಕ್ ರವರು ಜಮೀನು ಖರೀದಿ ಗರಿಷ್ಠ ಮಿತಿ ಅಂದರೆ 108 ಎಕರೆ ಖರೀದಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಭರವಸೆ ನೀಡಿದ್ದರು.

ಆದರೀಗ ಅದೇ ಸುಗ್ರೀವಾಜ್ನೆ ಮೂಲಕ ಒಬ್ಬರು ಎಷ್ಟು ಎಕರೆ ಜಮೀನು ಖರೀದಿಸಲು ಅನುಕೂಲ ಮಾಡಿಕೊಟ್ಟಿದೆ. ಇದರಿಂದ ಬಂಡವಾಳ ಶಾಹಿಗಳ ಕೈ ಬಲಪಡಿಸಿ ರೈತರನ್ನು ವಿನಾಶಕ್ಕೆ ನೂಕುವ ಕಾನೂನು ಜಾರಿಗೆ ತರಲು ಮುಂದಾಗಿದ್ದಾರೆ.

ತಾಲ್ಲೂಕಿನಲ್ಲಿ ರಾಜಕೀಯ ಪ್ರಾರಂಭಿಸಿದ ಮುಖ್ಯಮಂತ್ರಿಯವರು ಬಗರ್ ಹುಕುಂ ರೈತರಿಗೆ ಹಕ್ಕು ಪತ್ರ ಕೊಡಿಸುವುದಾಗಿ ಭರವಸೆ ನೀಡಿದ್ದರು. ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಹಾಗೂ ಸಂಸದ ಬಿ ವೈ ರಾಘವೇಂದ್ರರವರಿಗೆ ಬಗರ್ ಹುಕುಂ ಸಮೀತಿ ಅಧ್ಯಕ್ಷರನ್ನಾಗಿ ನೇಮಿಸಿದರೂ ಇಲ್ಲಿಯವರೆಗೆ ಒಂದು ಸಭೆಯನ್ನು ನಡೆಸದೇ 10 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡದೇ ಬಾಕಿ ಉಳಿದಿದೆ. ಭೂ ನ್ಯಾಯ ಮಂಡಳಿಯಡಿಯಲ್ಲಿ ಸುಮಾರು 930 ಕೇಸುಗಳು ಬಾಕಿ ಉಳಿದಿದ್ದು, ತಾಲ್ಲೂಕಿನ ಶಾಸಕರಂತೆ ಕೆಲಸ ಮಾಡುವ ಸಂಸದರು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.

ತಾಲೂಕಿನ ರೈತರು 80 ಸಾವಿರ ಹೆಕ್ಟೇರ್ ಜಮೀನು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಈಗಾಗಲೇ ಶೇಕಡಾ 25 ರಷ್ಟು ರೈತರು ಕಟಾವು ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ವರ್ತಕರಿಂದ ಕೇವಲ 1200 ರೂಪಾಯಿಗೆ ಖರೀದಿ ಆಗುತ್ತಿದೆ. 50 ಕೆಜಿಯ ಒಂದು ಚೀಲ ಡಿಎಪಿ ಗೊಬ್ಬರಕ್ಕೆ 1200 ರೂಪಾಯಿ ಆಗಿದೆಯಲ್ಲದೇ ಭತ್ತಕೂಡ ಕಟಾವಿಗೆ ಬರುತ್ತಿದೆ ಆದ್ದರಿಂದ, ಸಂಸದರು ಮುಖ್ಯಮಂತ್ರಿಗಳು ಕೂಡಲೇ ಖರೀದಿ ಕೇಂದ್ರ ತೆರೆಯುವುದರ ಜೊತೆಗೆ ಸಂಡ ಕೈಗಾರಿಕೆಯಲ್ಲಿ ಮೆಕ್ಕೆಜೋಳ ಖರೀದಿಗೆ 1750 ರೂಪಾಯಿ ಮೊತ್ತದ ಬೆಂಬಲ ಬೆಲೆ ನೀಡಿ ಖರೀದಿಸುವಂತಾಗ ಎಂದರು.

ಈ ಸಂದರ್ಭದಲ್ಲಿ ಕಸಬಾ ಬ್ಯಾಂಕ್ ನಿರ್ದೇಶಕ ಬಡಗಿ ಪಾಲಕ್ಷಪ್ಪ, ಕಿಸಾನ್ ಸೆಲ್ ಸದಸ್ಯ ದಯಾನಂದ, ಬಗರ್ ಹುಕುಂ ಸಮೀತಿಯ ಮಾಜಿ ಸದಸ್ಯ ರೇಣುಕಸ್ವಾಮಿ, ಮುಖಂಡರಾದ ಸುರೇಶ್ ಧಾರವಾಡ,ರಾಜು ಉಡುಗಣಿ ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!