ಮಳೆಗಾಲದಲ್ಲಿ ನಮ್ಮ ಜೀವನ ಪದ್ದತಿ ಹೇಗಿರಬೇಕು..? ಮಳೆಗಾಲದ ಮಾತು ಭಾಗ-1
![ಮಳೆಗಾಲದಲ್ಲಿ ನಮ್ಮ ಜೀವನ ಪದ್ದತಿ ಹೇಗಿರಬೇಕು..? ಮಳೆಗಾಲದ ಮಾತು ಭಾಗ-1](https://shikarinews.com/wp-content/uploads/2020/06/IMG_20200623_064631_365.jpg)
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
✍️: ಇಂದಿನ ವಿಷಯ:- ಮಳೆಗಾಲದ ಮಾತು-1
ಆದಾನಗ್ಲಾನ…..ಅಗ್ನಿಃ ಸನ್ನೋಪಿ ಸೀದತಿ ವರ್ಷಾಸು…..|
-ಅಷ್ಟಾಂಗ ಹೃದಯ ಸೂತ್ರಸ್ಥಾನ-3
ಬಾಹ್ಯ ಪ್ರಭಾವದಿಂದ ನಮ್ಮ ಶರೀರ ಬೆವರನ್ನು ಹೊರಹಾಕಿದರೆ, ಅದರ ಮೂಲಕ ಜಠರಾಗ್ನಿಯ(ಜೀರ್ಣಶಕ್ತಿ) ಉಷ್ಣತ್ವವು ಹೊರಹೋಗುತ್ತದೆ. ಆದಕಾರಣ ಹಸಿವು ಕಡಿಮೆಯಾಗಿ ಆಹಾರ ಜೀರ್ಣವಾಗುವ ಪ್ರಮಾಣವೂ ಕಡಿಮೆಯಾಗುತ್ತದೆ.
![](https://shikarinews.com/wp-content/uploads/2020/06/download-4.jpeg)
ಆದರೆ, ಆಂತರಿಕ ಕಾರಣದಿಂದ ಅಂದರೆ ಶಾರೀರಿಕ ವ್ಯಾಯಾಮದಿಂದ ಬೆವರಿದರೆ, ಉಷ್ಣತ್ವ ಹೊರಹೋಗುವ ಬದಲು ಕರಗಿದ ಮೇದಸ್ಸು ಹೊರಹೋಗುತ್ತದೆ ಮತ್ತು ಅಗ್ನಿಯು ವೃದ್ಧಿಯಾಗುತ್ತದೆ.
![](https://shikarinews.com/wp-content/uploads/2020/06/images-76.jpeg)
ಬೇಸಿಗೆಯಲ್ಲಿ ಬಾಹ್ಯ ಕಾರಣಕ್ಕೆ ಬೆವರುವುದರಿಂದ ಅಗ್ನಿ ದುರ್ಬಲಗೊಂಡಿರುತ್ತದೆ ಮತ್ತು ಈ ಅವಸ್ಥೆಯಲ್ಲಿ ಇರುವಾಗಲೇ ಮಳೆಗಾಲ ಆರಂಭವಾಗುತ್ತದೆ.
ಮಳೆಗಾಲ(ವರ್ಷಾ ಋತು) ತನ್ನ ತಂಪಿನ ಅಥವಾ ಚಳಿಯ ಕಾರಣ ಜಠರಾಗ್ನಿಯನ್ನು (ಜೀರ್ಣ ಶಕ್ತಿಯನ್ನು ) ಹೆಚ್ಚಿಸುವ ಬದಲು ಮತ್ತಷ್ಟೂ ಕುಗ್ಗಿಸುತ್ತದೆ. ಇದಕ್ಕೆ ಕಾರಣ, ಈ ಕಾಲದ ನೀರಿನಲ್ಲಿ ಉಂಟಾಗುವ “ಆಮ್ಲೀಯತೆ”!! ಅಂದರೆ ಜಲವು ಆಮ್ಲಜಲವಾಗಿ ಪರಿವರ್ತನೆ ಆಗಿರುತ್ತದೆ.
![](https://shikarinews.com/wp-content/uploads/2020/06/images-75.jpeg)
ಆಮ್ಲವು ಅಗ್ನಿಯ ಆಶ್ರಯ ಸ್ಥಾನವಾದ ಪಿತ್ತದ ದ್ರವ ಭಾವವನ್ನು ಹೆಚ್ಚಿಸಿ ಮೊದಲೇ ಕಡಿಮೆ ಇದ್ದ ಉಷ್ಣತ್ವವನ್ನು ಇನ್ನಷ್ಟೂ, ಮತ್ತಷ್ಟೂ ಕ್ಷೀಣವಾಗುವಂತೆ ಮಾಡುತ್ತದೆ.
ಹಾಗಾಗಿ, ಮಳೆಗಾಲದಲ್ಲಿ ಈ ಕೆಳಗಿನ ಬದಲಾವಣೆಗಳು ಇರುತ್ತವೆ.
- ಸೋಂಕುಗಳು ಹೆಚ್ಚು
- ಗಂಟಲು ಎದೆ ಪುಪ್ಫುಸಗಳು ದುರ್ಬಲಗೊಳ್ಳುತ್ತವೆ.
- ದೈಹಿಕವಾಗಿ ಕೆಲಸ ಮಾಡದೇ ಇದ್ದರೆ, ಹಸಿವು ಅತ್ಯಂತ ಕಡಿಮೆಯಾಗುತ್ತದೆ.
- ರಜೋ ಗುಣದ ಕಾರಣ ಮೃದುವಾಗಿ ತಲೆಸುತ್ತುವಿಕೆ
ಮತ್ತು ನಿದ್ದೆಯು ಸ್ವಪ್ನಗಳಿಂದ ಕೂಡಿರುತ್ತದೆ. - ಮನಸ್ಸು ಸ್ವಲ್ಪ ತಳಮಳಿಸುತ್ತಿರುತ್ತದೆ.
![](https://shikarinews.com/wp-content/uploads/2020/06/IMG_20200611_062841_053-1.jpg)
ಇದರ ಪರಿಹಾರೋಪಾಯಗಳನ್ನು ನಾಳೆ ನೋಡೋಣ.
ವಿಶ್ವಹೃದಯಾಶೀರ್ವಾದವಂ ಬಯಸಿ
-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengalu