ಶಿವಮೊಗ್ಗ:ಲಾಕ್ ಡೌನ್ ನಡುವೆ ಮೂರು ಜನರ ತಿಥಿಗೆ ಸೇರಿದ್ರೂ ನೂರು ಜನ..!
![ಶಿವಮೊಗ್ಗ:ಲಾಕ್ ಡೌನ್ ನಡುವೆ ಮೂರು ಜನರ ತಿಥಿಗೆ ಸೇರಿದ್ರೂ ನೂರು ಜನ..!](https://shikarinews.com/wp-content/uploads/2020/04/WhatsApp-Image-2020-04-01-at-13.13.05.jpeg)
ಶಿವಮೊಗ್ಗ: ಶಿವಮೊಗ್ಗ ನಗರದ ತುಂಗಾ ನದಿಯ ಕೋರ್ಪಲಯ್ಯನ ಛತ್ರದ ಬಳಿ ಅಶೋಕ ನಗರ ಕೆಲವು ಕುಟುಂಬದವರು ಸೇರಿಕೊಂಡು ಸಾಮೂಹಿಕ ತಿಥಿ ಕಾರ್ಯವನ್ನು ನಡೆಸುತ್ತಿದ್ದರು.
ಶಿವಮೊಗ್ಗದ ತುಂಗಾ ನದಿಯಲ್ಲಿ ತಿಥಿ ಕಾರ್ಯ ನಡೆಸುತ್ತಿದ್ದವರನ್ನು ಓಡಿಸಿದ ಪೊಲೀಸರು ಗಮನಿಸಿದ ಪೋಲಿಸರು ಅವರನ್ನು ಅಲ್ಲಿಂದ ಚದುರಿಸಿದ್ದಾರೆ
ಇತ್ತೀಚೆಗೆ ಮೃತಪಟ್ಟ ಮೂವರ ಜನರ ತಿಥಿ ಕಾರ್ಯವನ್ನು ಮಾಡಲು ಕುಟುಂಬದವರು ಬಂಧುಮಿತ್ರರು ಆಗಮಿಸಿದ್ದರು ತುಂಗಾ ನದಿಯ ಕೋರ್ಪಲಯ್ಯನ ಛತ್ರದ ಬಳಿನಡೆಯುತ್ತಿದ್ದ ತಿಥಿ ಕಾರ್ಯ ನಡೆಯುತ್ತಿತ್ತು.
ಈ ಕಾರ್ಯದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು ಲಾಕ್ ಡೌನ್ ಹಾಗೂ ಸೆಕ್ಷನ್ 144 ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪೊಲೀಸರು ಜನರನ್ನು ಓಡಿಸಿದ್ದಾರೆ ಬಳಿಕ ಒಂದಿಬ್ಬರು ಸೇರಿ ತಿಥಿ ಕಾರ್ಯ ನಡೆಸಿದರು.