ಕರೋನ ಕರ್ತವ್ಯ ಲೋಪ ಶಿರಾಳಕೊಪ್ಪ ಪ.ಪಂ ಮುಖ್ಯಾಧಿಕಾರಿ ಅಮಾನತು…!
![ಕರೋನ ಕರ್ತವ್ಯ ಲೋಪ ಶಿರಾಳಕೊಪ್ಪ ಪ.ಪಂ ಮುಖ್ಯಾಧಿಕಾರಿ ಅಮಾನತು…!](https://shikarinews.com/wp-content/uploads/2020/03/shirokopa.jpg)
ಶಿವಮೊಗ್ಗ : ಕರೋನ ವೈರಸ್ ನಿಯಂತ್ರಿಸುವ ಸಲುವಾಗಿ ಇಡೀ ದೇಶದ್ಯಂತ ವಿವಿಧ ಇಲಾಖೆ ಅಧಿಕಾರಿಗಳು ಶ್ರಮವಹಿಸಿ ದುಡಿಯುತ್ತಿದ್ದು ಶಿರಾಳಕೊಪ್ಪ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹನುಮಂತಪ್ಪ ಕರ್ತವ್ಯ ಲೋಪ ಮಾಡಿದ್ದು ಜಿಲ್ಲಾಧಿಕಾರಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
![](https://shikarinews.com/wp-content/uploads/2020/03/WhatsApp-Image-2020-03-31-at-15.40.23-1024x473.jpeg)
ಕರ್ತವ್ಯ ಸಮಯದಲ್ಲಿ ಕೇಂದ್ರ ಸ್ಥಾನದಲ್ಲಿ ಇರದೇ ತಮ್ಮ ನಿವಾಸಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು ಮತ್ತು ಅವರ ಕರ್ತವ್ಯ ಲೋಪದ ಕುರಿತು ಸಾರ್ವಜನಿಕರು ಮತ್ತು ಪತ್ರಕರ್ತರಿಂದ. ಸಾಕಷ್ಟು ದೂರು ಬಂದಿದ್ದು ಕರ್ತವ್ಯ ಲೋಪ ಮಾಡಿರುವ ಹನುಮಂತಪ್ಪ ವೈ ಮಣ್ಣವಡರ್ ಇವರನ್ನು ತಕ್ಷಣವೇ ಜಾರಿ ಬರುವಂತೆ ಅಮಾನತು ಗೋಳಿಸಿ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಇವರ ಸ್ಥಾನಕ್ಕೆ ಹೇಮಂತ್ ಡೊಳ್ಳೆ ಅವರನ್ನು ಶಿರಾಳಕೊಪ್ಪ ಪಟ್ಟಣ ಪಂಚಯತ್ ಮುಖ್ಯಾಧಿಕಾರಿಯಾಗಿ ನಿಯೋಜಿಸಲಾಗಿದೆ.