ಶಿಕಾರಿಪುರ: ಇಡೀ ಹಿಂದೂ ಸಮಾಜ ಛತ್ರಪತಿ ಶಿವಾಜಿನ್ನು ಎಂದಿಗೂ ಮರೆಯಬಾರದು: ಚೈತ್ರಾ ಕುಂದಾಪುರ..!
![ಶಿಕಾರಿಪುರ: ಇಡೀ ಹಿಂದೂ ಸಮಾಜ ಛತ್ರಪತಿ ಶಿವಾಜಿನ್ನು ಎಂದಿಗೂ ಮರೆಯಬಾರದು: ಚೈತ್ರಾ ಕುಂದಾಪುರ..!](https://shikarinews.com/wp-content/uploads/2020/02/19skp1.jpeg)
ಶಿಕಾರಿಪುರ: ಭಾರತದಲ್ಲಿ ಭಾರತದಲ್ಲಿ ಅನೇಕ ರಾಜ ಮಹಾರಾಜರು ಬಂದು ಹೊಗಿದ್ದು ಅದರೆ ಹಿಂದೂ ಸಮಾಜವನ್ನು ಪುನರ್ ಸ್ಥಾಪನೆ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರನ್ನು ಎಂದಿಗೂ ಮರೆಯಬಾರದ್ದು ಎಂದು ಹಿಂದುಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೇಳಿದರು.
ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿ ಗ್ರಾಮದಲ್ಲಿ ನಡೆದ ಛತ್ರಪತಿ ಶಿವಾಜಿಯವರ 389 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶತಮಾನಗಳಿಂದ ಹಿಂದು ಸಮಾಜದ ಮೋಘಲರ ಆಕ್ರಮಣದಿಂದ ಮುಕ್ತವಾಗಲು ಇಡೀ ಹಿಂದು ಸಮಾಜ ಕಾಯುತ್ತಿತ್ತು ಯಾವ ಹಿಂದೂಗಳ ಮಹಾ ಪುರಷನ ಜನನಕ್ಕಾಗಿಕಾಯುತ್ತಿದ್ದರೋ ಅವರೆ ಛತ್ರಪತಿ ಶಿವಾಜಿ ಮಹಾರಾಜ್ ಜಿಜಾಬಾಯಿ ಅವರ ರತ್ನಗರ್ಭದಲ್ಲಿ ಜನಿಸಿದ ಅವರು ಹಿಂದು ಸಮಾಜವನ್ನು ಮೋಘಲರ ದಾಸ್ಯದಿಂದ ಮುಕ್ತ ಮಾಡಿದರು.
![](https://shikarinews.com/wp-content/uploads/2020/02/WhatsApp-Image-2020-02-19-at-16.45.13-1-1024x512.jpeg)
ಗೋ ಹತ್ಯೆ, ಹಿಂದೂ ಮಹಿಳೆಯ ಮೇಲೆ ಅತ್ಯಚಾರ ಇದಲ್ಲೆ ದ ಕಣೀರಿಗೆ ಮೋಘಲರನ್ನು ದೋಂಸ ಮಾಡಲು ಭಗವಂತ ಶಿವಾಜಿ ರೂಪದಲ್ಲಿ ಜನನವಾಯ್ತು ಹಿಂದವಿ ಸಮಾಜಕ್ಕೆ ಸ್ವಾಭಿಮಾನ, ಸ್ವಾತಂತ್ರ್ಯ ದಾಸ್ಯದಿಂದ ಮುಕ್ತಗೋಳಿಸಿದರು ಮೋಘಲರು ಶಿವಾಜಿಯನ್ನು ಬೆಟ್ಟದ ಇಲಿ ಎಂದು ಕರೆಯುತ್ತಿದ್ದರು ಇತಿಹಾಸ ಪುಸ್ತಕಗಳಲ್ಲಿ ಇಂದಿಗೂ ಅದರೆ ರೀತಿ ನಮೂದಿಸಲಾಗಿದೆ ಅದರೆ ಶಿವಾಜಿ ಬೆಟ್ಟದ ಹುಲ ನಿಜವಾದ ಇತಿಹಾಸವನ್ನು ಮರೆಮಾಚಲಾಗಿದೆ ನಮ್ಮ ಮಕ್ಕಳಿಗೆ ನಿಜವಾದ ಇತಿಹಾಸವನ್ನು ಭೋಧಿಸಬೇಕಾಗಿದೆ ಇತಿಹಾಸದ ಮಹಾನ್ ಪುರುಷರ ಬದುಕಿದ ರೀತಿ ಜೀವನ ಆದರ್ಶ ಸಂದೇಶವನ್ನು ನೀಡಬೇಕು ನೀಡಡಬೇಕಾಗಿದೆ ಎಂದರು.
![](https://shikarinews.com/wp-content/uploads/2020/02/WhatsApp-Image-2020-02-19-at-16.45.14-3-1024x512.jpeg)
ಅಮೇರಿಕಾ ವಿಯೋಟ್ನಂ ದೇಶದ ನಡುವು ಯುದ್ದವಾದಗ ಅತ್ಯಂತ ಬಲಿಷ್ಠ ರಾಷ್ಟ್ರವನ್ನು ಚಿಕ್ಕ ದೇಶ ವಿಯೋಟ್ನಂ ಸೋಲಿಸುತ್ತದೆ ನಿಮ್ಮ ಗೆಲುವಿಗೆ ಕಾರಣ ಏನು ಎಂದು ಕೇಳಿದರೆ ಆ ದೇಶ ಪ್ರಧಾನಿ ಹೇಳುತ್ತಾರೆ ನಮ್ಮ ಗೆಲುವಿಗೆ ಕಾರಣ ಭಾರತ ಒಬ್ಬ ಸರ್ವಶ್ರೇಷ್ಠ ರಾಜ ಛತ್ರಪತಿ ಶಿವಾಜಿ ಮಹಾರಾಜ್ ನಮ್ಮಗೆ ಸ್ಪೂರ್ತಿ ಅವರ ಗೆರಿಲಾ ಯುದ್ದ ತಂತ್ರ ನಮಗೆ ಪ್ರೇರಣೆ ಅಷ್ಟೆ ಅಲ್ಲ ವಿಯೋಟ್ನಂ ದೇಶದಲ್ಲಿ ಇಂದಿಗೂ ಶಿವಾಜಿ ಮಹಾರಾಜರನ್ನು ಪೂಜೆ ಮಾಡಲಾಗುತ್ತದೆ ಅದರೆ ಶಿವಾಜಿ ಹುಟ್ಟಿದ ನಾಡಿನಲ್ಲಿ ಬುದ್ದಿ ಜೀವಿಗಳ ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ ವಿರೋಧ ಮಾಡಿದರು ಯಾವಸ್ಥಿತಿಯಲ್ಲಿ ಹಿಂದೂ ಸಮಾಜ ಇದೆ ಎಂಬುದನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು ಇತಿಹಾವನ್ನು ನಾವು ಇರುವುದನ್ನು ಇರುವಹಾಗೆ ತೊರಿಸಿದ್ದಾರೆ ನಮ್ಮ ರಾಷ್ಟ್ರ ಇನ್ನೂ ಹೆಚ್ಚು ಜಾಗೃತವಾಗುತ್ತದೆ ಸತ್ಯ ಹೇಳುವವರನ್ನು ಕೋಮುವಾದಿಗಳು ಎಂದು ಬಿಂಬಿಸಲಾಗುತ್ತದೆ ಎಂದರು.
![](https://shikarinews.com/wp-content/uploads/2020/02/WhatsApp-Image-2020-02-19-at-12.17.41-1024x512.jpeg)
ಇತ್ತಿಚೇಗೆ ಹಿಂದೂ ಯುವಕ ಯುವತಿಯರಲ್ಲಿ ಹೊಸ ಟ್ರೆಂಡ್ ಆರಂಭವಾಗಿದ್ದು ಟ್ಯಾಟೋ ಗಳನ್ನು ಶಿವಾಜಿ, ಭಜರಂಗಿ, ಪೋಟೋ ಇರುತ್ತದೆ ಟ್ರಂಡ್ ಬದಲಾಗಿದೆ ಇವಾಗಲೂ ಹೀರೋ ಅಂದ್ರೆ ಶಿವಾಜಿ ಮಹಾರಾಜರು ಎಂದರು.
ಯಾವ ಮನೆಯಲ್ಲಿ ಜಿಜಾಬಾಯಿ ಇರುತ್ತಾಳೋ ಅಲ್ಲಿ ಶಿವಾಜಿ ಹುಟ್ಟುತ್ತಾನೆ ಅದರೆ ನಮ್ಮ ತಾಯಂದಿರಿಗೆ ಧಾರಾವಾಹಿಗಳನ್ನು ನೋಡುವುದಕ್ಕೆ ಸಮಯ ಇಲ್ಲ ಮಕ್ಕಳಿಗೆ ಸಂಸ್ಕಾರ, ರಾಷ್ಟ್ರೀಯತೆ,ಧರ್ಮದ ಬಗ್ಗೆ ಭೋದನೆ ಮಾಡುವವರು ಯಾರು ಪ್ರತಿ ಮನೆಯಲ್ಲಿ ಜಿಜಾಬಾಯಿಯಂತೆ ತಾಯಿ ಇರಬೇಕು ಹಾಗ ಮಗು ಶಿವಾಜಿಯಂತೆ ರಾಜನಾಗುತ್ತನೆ ಮತ್ತು ಯುವಕರ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡುವುದು ವಾಟ್ಸಪ್,ಪೇಸಬುಕ್ ನಲ್ಲಿ ಹಿಂದುತ್ವ ತೋರಿಸುತ್ತಾರೆ ಅದರೆ ಕೃತಿಯಲ್ಲಿ ಏನೂ ಇಲ್ಲ ಮೋಬೇಲ್ ಹಿಂದುತ್ವ ಬಿಟ್ಟು ಧರ್ಮರಕ್ಷಣೆ ಹಿಂದು ಸಮಾಜವನ್ನು ಒಗ್ಗೂಡಿಸುವಲ್ಲಿ ಯುವಕರು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ವೀರ ಮರಣಹೊಂದಿ ಸೈನಿಕರ ಪತ್ನಿ ವೀಣಾ ಉಮೇಶಪ್ಪ, ಮತ್ತು ಸುಧಾ ಮಾಲತೇಶ ಅವರಿಗೆ ಸನ್ಮಾನ ನಡೆಸಲಾಯಿತು.