ಊಹಾಪೋಹಗಳಿಗೆ ತೆರೆ ಎಳೆದ ಕುಮಾರ್ ಬಂಗಾರಪ್ಪ ಫೇಸ್ಬುಕ್ ಪೋಸ್ಟ್..!
![ಊಹಾಪೋಹಗಳಿಗೆ ತೆರೆ ಎಳೆದ ಕುಮಾರ್ ಬಂಗಾರಪ್ಪ ಫೇಸ್ಬುಕ್ ಪೋಸ್ಟ್..!](https://shikarinews.com/wp-content/uploads/2024/03/IMG_20240318_111152.jpg)
ಶಿವಮೊಗ್ಗ ರಾಜಕೀಯದಲ್ಲಿ ದಿನೇ ದಿನೇ ಸಾಕಷ್ಟು
ತಿರುವಗಳು ಕಾಣುತ್ತಿದ್ದು ಚುನಾವಣೆ ಸಮಿತಿ ಸುತ್ತಿರುವ ಈ ಸಂದರ್ಭದಲ್ಲಿ ಕುಮಾರ ಬಂಗಾರಪ್ಪನವರ ನಡೆ ಏನು ಎಂದು ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವ 10 ಹಲವಾರು ವಿಷಯಗಳು ರಾಜಕೀಯ ವಲಯದಲ್ಲಿ ಸುದ್ದಿಗಳು ಹರಿದಾಡಿತ್ತು ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೀತಾ ಶಿವರಾಜಕುಮಾರ್ ಹೆಸರು ಘೋಷಣೆ ಬಳಿಕ ಒಂದಿಷ್ಟು ಗೊಂದಲಗಳು ಹೆಚ್ಚಾಗಿದ್ದು ಕುಮಾರರ ಬಂಗಾರಪ್ಪ ನಡೆಯೇನು ಎಂಬುದು ನಿಗೂಢವಾಗಿತ್ತು ಈ ಎಲ್ಲಾ ಪ್ರಶ್ನೆಗಳಿಗೆ ಕುಮಾರ್ ಬಂಗಾರಪ್ಪ ಅವರು ತಮ್ಮ ಫೇಸ್ಬುಕ್ ಖಾತೆಯ ಮೂಲಕ ಮೋದಿ#24 ಎಂದು ಪೋಸ್ಟ್ ಮಾಡುವ ಮೂಲಕ ಅವರ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಕುಮಾರ್ ಬಂಗಾರಪ್ಪ ಕುಟುಂಬ ಒಂದಾಗಲಿದೆ ಈ ಚುನಾವಣೆಯಲ್ಲಿ ಸಹೋದರರು ಒಂದಾಗಿ ಚುನಾವಣೆಯನ್ನು ನಡೆಸುತ್ತಾರೆ ಈ ಎಲ್ಲಾ ಪ್ರಶ್ನೆಗಳಿಗೂ ಈ ಒಂದು ಪೋಸ್ಟ್ ಉತ್ತರವಾಗಲಿದೆ ತಮ್ಮ ಫೇಸ್ ಬುಕ್ ಪೋಸ್ಟ್ ಗಳ ಮೂಲಕವೇ ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿ ಉಳಿದಿರುವ ನಿಲುವನ್ನು ವ್ಯಕ್ತಪಡಿಸಿದ್ದಾರೆ.